
ಬೆಂಗಳೂರು(ಅ.17): ಬೆಂಗಳೂರಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟ ಮಿತಿಮೀರಿದೆ. ಆಫ್ರಿಕಾ ಮೂಲದ ವಾಸ್-ಯೂ ಎಂಬಾತ ಜನ ಓಡಡುವ ಸ್ಥಳದಲ್ಲೇ ಮೂತ್ರವಿಸರ್ಜನೆ ಮಾಡಿ ಆಟಾಟೋಪ ಮೆರೆದಿದ್ದಾನೆ.
ನಗರದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಕೋಗಿಲು ಕ್ರಾಸ್ ನಲ್ಲಿ, ನಿನ್ನೆ ರಾತ್ರಿ 10ಕ್ಕೆ ನಡೆದಿದೆ. ಕಂಠಮಟ್ಟ ಕುಡಿದಿದ್ದ ವಾಸ್ ಯೂ, ಕೋಗಿಲು ಕ್ರಾಸ್'ನ ಉಡುಪಿ ಗ್ರಾಂಡ್ ಹೋಟೆಲ್ ಸರ್ಕಲ್ ಬಳಿ ಊಟ ಪಾರ್ಸೆಲ್ ಮಾಡಿಸಿಕೊಂಡು ಹೊರ ಬಂದಿದ್ದಾರೆ. ಬಳಿಕ ಜನ ಓಡಾಡುವ ಸ್ಥಳದಲ್ಲೆ ಮೂತ್ರ ವಿಸರ್ಜಿಸಿ, ಯುವತಿಯರು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ್ದಾನೆ.
ಜಂಕ್ಷನ್'ನಲ್ಲಿ ಈ ರೀತಿ ಮಾಡಬಾರದೆಂದಿದ್ದಕ್ಕೆ ಸ್ಥಳೀಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಜನರು ತನಗೆಲ್ಲಿ ಥಳಿಸುವರೋ ಎಂದು ಅರಿವಾಗಿ ತನ್ನ ಕಾಲಿಗೆ ಬುದ್ದಿ ಹೇಳಿ, ಅಲ್ಲಿಂದ ಪರಾರಿಯಾಗಿದ್ದಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.