ಡಿಸ್ಚಾರ್ಜ್ ಆದ ನಂತರ ಪ್ರಥಮ್ ಮೊದಲ ಮಾತು: ಸಂಜನಾ ಸಂಬಂಧದ ಬಗ್ಗೆ ಏನು ಹೇಳಿದರು ಗೊತ್ತೆ ?

Published : Apr 08, 2017, 12:04 PM ISTUpdated : Apr 11, 2018, 01:12 PM IST
ಡಿಸ್ಚಾರ್ಜ್ ಆದ ನಂತರ ಪ್ರಥಮ್ ಮೊದಲ ಮಾತು: ಸಂಜನಾ ಸಂಬಂಧದ ಬಗ್ಗೆ ಏನು ಹೇಳಿದರು ಗೊತ್ತೆ ?

ಸಾರಾಂಶ

ಕೆಲವೊಂದು ವಿಚಾರಗಳು ಮನಸ್ಸನ್ನು ಘಾಸಿಗೊಳಿಸಿವೆ.

ಬೆಂಗಳೂರು(ಏ.08): ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಆತ್ಮಹತ್ಯೆ ಹಾಗೂ ಮತ್ತೊಬ್ಬರು ಬಿಗ್ ಬಾಸ್ ಸ್ಪರ್ಧಿಯಾದ ಸಂಜನಾ ಸಂಬಂಧದ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.

'ನಾನು ದುಡುಕಿ ಆತ್ಮಹತ್ಯೆಗೆ ಯತ್ನಿಸಿದ್ದೆ, ಈಗ ತಪ್ಪಿನ ಅರಿವಾಗಿದೆ, ಇನ್ಮುಂದೆ ಹೀಗೆ ಮಾಡುವುದಿಲ್ಲ. ಕೆಲವೊಂದು ವಿಚಾರಗಳು ಮನಸ್ಸನ್ನು ಘಾಸಿಗೊಳಿಸಿವೆ. ಯಾವ ಹುಡುಗಿಯರ ಜೊತೆಯೂ ಸಂಬಂಧ ಇಲ್ಲ. ನನಗೆ ಯಾವುದೇ ಕ್ರಿಕೆಟ್​ ಬೆಟ್ಟಿಂಗ್ ಹುಚ್ಚಿಲ್ಲ. ನನ್ನ ಬಗ್ಗೆ ಯಾವುದೇ ವದಂತಿ ಹಬ್ಬಿಸಬೇಡಿ. ಬಿಗ್​ ಬಾಸ್​​ನಲ್ಲಿ ಗೆದ್ದ ಹಣ ಇನ್ನೂ ನನ್ನ ಕೈಸೇರಿಲ್ಲ. ಹಣ ಬಂದರೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಹಣ, ಉಳಿದ ಹಣ ಗ್ರಾಮದ ವಿದ್ಯುತ್​ ದೀಪ ಅಳವಡಿಕೆಗೆ ಕೊಡುವೆ.

ಖಾಸಗಿ ಜೀವನಕ್ಕೆ ಧಕ್ಕೆಯಾಗುವ ವಿಚಾರಗಳನ್ನು ಪ್ರಸಾರ ಮಾಡಬೇಡಿ. ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ. ನಾನು ಯಾವುದೇ ಸಾಲವನ್ನು ಮಾಡಿಕೊಂಡಿಲ್ಲ.ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದೆ.ಇನ್ನು ಮುಂದಿನ ದಿನ ಈ ರೀತಿ ಆಗೋದಿಲ್ಲ. ಇಲ್ಲಸಲ್ಲದ ವಂದತಿಗಳಿಂದ ಮನಸಿಗೆ ತುಂಬಾ ನೋವಾಗಿದೆ.ಬಿಗ್ ಬಾಸ್ ಸ್ಪರ್ಧಿ ಸಂಜನಾ ಜೊತೆ ನನಗೆ ಯಾವುದೇ ಸಂಬಂಧವಿಲ್ಲ. ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ'ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಾಂಧೀಜಿ ಹೆಸರು ರದ್ದತಿ ಅವರ 2ನೇ ಹತ್ಯೆಗೆ ಸಮ : ಚಿದಂಬರಂ ಕಿಡಿ
ಸಂಸತ್ತಲ್ಲಿ ಇ-ಸಿಗರೇಟು ಸೇದಿದ್ದು ಕೀರ್ತಿ ಆಜಾದ್ : ಬಿಜೆಪಿ