
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿರುದ್ಧ ಪ್ರಕಾಶ್ ರೈ ಮತ್ತೆ ಗುಡುಗಿದ್ದಾರೆ. ಭಾರತವನ್ನು ನಾವು ಎತ್ತ ಸಾಗಲು ಬಿಟ್ಟಿದ್ದೇವೆ. ಷಾ ಹಾಗೂ ಮೋದಿ ಇಬ್ಬರೂ ಕೂಡ ಸುಳ್ಳರು, ಅವರು ದಿನಕ್ಕೆ ನೂರು ಸುಳ್ಳನ್ನು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಪ್ಪು ಹಣ ಬೇಡ ಎನ್ನುವ ಅವರು ಕಪ್ಪು ಹಣವನ್ನೇ ಪಕ್ಷದ ಪ್ರಚಾರಕ್ಕೆ ಬಳಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಗಾಂಧಿ ಎಂದು ಹೇಳುವ ಅವರಲ್ಲಿ ಸಾಮಾಜಿಕವಾದ ನ್ಯಾಯ ಎನ್ನುವುದೇ ಇಲ್ಲ. ಮೋದಿಯನ್ನು ಮೊದಲು ಓಡಿಸಿ ನಾವು ಒಂದಾಗಬೇಕು ಎಂದಿದ್ದಾರೆ.
ಅಲ್ಲದೇ ಅನಂತ್ ಕುಮಾರ್ ಹಗಡೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಯಾವಾಗಲೂ ರಕ್ತ ರಕ್ತ ಎಂದು ಜಪಿಸುತ್ತಾರೆ ಎಂದು ಹೇಳಿದ್ದಾರೆ. ಹೀಗಾದಲ್ಲಿ ಒಂದು ಬಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ಅವರ ಬ್ಲಡ್ ಗ್ರೂಪ್ ಯಾವುದು ಎಂದಾಗಲೇ ಅವರಿಗೆ ಅರಿವು ಮೂಡುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.