
ಬೆಂಗಳೂರು : ನಲಪಾಡ್ ಬೆನ್ನಿಗೆ ನಿಂತ ಶಾಂತಿನಗರ ಯೂತ್ ಕಾಂಗ್ರೆಸ್ ಘಟಕವು ಆತನನ್ನು ಹೀರೋ ಮಾಡಲು ಹೊರಟಿದೆ. ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್’ನಲ್ಲಿ ಜಸ್ಟೀಸ್ ಫಾರ್ ನಲಪಾಡ್ ಎಂದು ಟ್ಯಾಗ್ ಲೈನ್ ಹಾಕಿಕೊಂಡಿದೆ.
ತನ್ನ ಫೇಸ್’ಬುಕ್ ಗ್ರೂಪ್’ನಲ್ಲಿ ಈ ರೀತಿಯಾಗಿ ಹಾಕಿಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಶಾಂತಿನಗರ ಕಾಂಗ್ರೆಸ್ ಘಟಕದ ಸದಸ್ಯರಿಗೆ ಜನರು ಛೀಮಾರಿ ಹಾಕಿದ್ದಾರೆ.
ಆತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಈ ರೀತಿಯಾಗಿ ಆತನನ್ನು ಹೀರೋ ಮಾಡಲು ಹೊರಟಿರುವುದು ಸರಿಯೇ ಎಂದು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಇನ್ನೂ ಕೂಡ ಕಾಂಗ್ರೆಸ್’ನಲ್ಲಿಯೇ ಇದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.