ಹಾಲಿ ಕನ್ನಡ ಧ್ವಜವನ್ನೇಕೆ ಅಧಿಕೃತ ನಾಡಧ್ವಜವಾಗಿ ಘೋಷಿಸಲಿಲ್ಲ? ಇಲ್ಲಿದೆ ಪ್ರಮುಖ ಕಾರಣ

Published : Mar 10, 2018, 04:05 PM ISTUpdated : Apr 11, 2018, 12:50 PM IST
ಹಾಲಿ ಕನ್ನಡ ಧ್ವಜವನ್ನೇಕೆ ಅಧಿಕೃತ ನಾಡಧ್ವಜವಾಗಿ ಘೋಷಿಸಲಿಲ್ಲ? ಇಲ್ಲಿದೆ ಪ್ರಮುಖ ಕಾರಣ

ಸಾರಾಂಶ

ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಕಳೆದ ಗುರುವಾರ ಅಂಗೀಕರಿಸಿದೆ ಹಾಲಿ ಚಾಲ್ತಿಯಲ್ಲಿರುವ ಧ್ವಜವನ್ನೇಕೆ ಸರ್ಕಾರ ಅಂಗೀಕರಿಸಿಲ್ಲವೆಂಬುವುದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ

ಬೆಂಗಳೂರು: ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಕಳೆದ ಗುರುವಾರ ಅಂಗೀಕರಿಸಿದೆ.  ನೂತನ ಧ್ವಜ ಸ್ವರೂಪ, ವಿನ್ಯಾಸ ಹೇಗಿರಬೇಕು ಎಂಬಿತ್ಯಾದಿಗಳ ವಿಷಯಗಳ ಬಗ್ಗೆ ಸಾಕಾಷ್ಟು ಚರ್ಚೆ ನಡೆದಿತ್ತು.

ಕನ್ನಡಪರ ಸಂಘಟನೆಗಳು ಈಗಿರುವ (ಹಳದಿ ಮತ್ತು ಕೆಂಪು) ಧ್ವಜವನ್ನೇ ಅಧಿಕೃತ ನಾಡಧ್ವಜವಾಗಿ  ಘೋಷಿಸಬೇಕೆಂದು ಪಟ್ಟು ಹಿಡಿದ್ದವು. ಆದರೆ ಸಾಕಷ್ಟು ಚರ್ಚೆಗಳ ಬಳಿ ಸರ್ಕಾರವು ಕೆಂಪು, ಬಿಳಿ, ಹಳದಿ ಬಣ್ಣವಿರುವ, ಹಾಗೂ ಸರ್ಕಾರದ ಲಾಂಛನವಿರುವ ವಿನ್ಯಾಸವನ್ನೇ ಅಂತಿಮಗೊಳಿಸಿದೆ.

ಹಾಲಿ ಚಾಲ್ತಿಯಲ್ಲಿರುವ ಧ್ವಜವನ್ನೇಕೆ ಸರ್ಕಾರ ಅಂಗೀಕರಿಸಿಲ್ಲವೆಂಬುವುದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ನಾಡಧ್ವಜವನ್ನು ಅಂತಿಮಗೊಳಿಸಲು ರಚಿಸಲಾಗಿದ್ದ ಸಮಿತಿಯು ನೂತನ ವಿನ್ಯಾಸವನ್ನು ಅಂತಿಮಗೊಳಿಸಲು ಪ್ರಮುಖ ಕಾರಣವಿದೆ.

ಮೊದಲನೆದಾಗಿ, ಹಾಲಿ ಧ್ವಜದ ಮೇಲೆ ರಾಜಕೀಯ ಪಕ್ಷವೊಂದು ಹಕ್ಕುಸ್ವಾಮ್ಯ ಹೊಂದಿದೆ. ನಾಡಧ್ವಜವು ರಾಜಕೀಯ ಪಕ್ಷಗಳ ಧ್ವಜಗಳಿಗಿಂತ ಭಿನ್ನವಾಗಿರಬೇಕು. ಬಿಳಿ ಬಣ್ಣ ಬಳಸುವುದರಿಂದ ಲಾಂಛನ ಹಾಕಿಕೊಳ್ಳಲು ಸಹಕಾರಿಯಾಗಿದೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!