ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು? ರಾಜಕೀಯ ನಾಯಕರಿಗೆ ಪ್ರಕಾಶ್ ರೈ 10 ಪ್ರಶ್ನೆಗಳು

Published : Feb 16, 2018, 03:41 PM ISTUpdated : Apr 11, 2018, 12:43 PM IST
ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು? ರಾಜಕೀಯ ನಾಯಕರಿಗೆ ಪ್ರಕಾಶ್ ರೈ 10 ಪ್ರಶ್ನೆಗಳು

ಸಾರಾಂಶ

ಕರ್ನಾಟಕದಲ್ಲಿ ಇರುವುದು ನಿಮಗೆ ತಿಳಿದಿದೆ. ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು?

ವಿವಿಧ ಪಕ್ಷಗಳ ರಾಜಕೀಯ ನಾಯಕರೇ! ಕೃಷಿಕರು, ಕೈಮಗ್ಗ ನೇಕಾರರು, ಕುಶಲಕರ್ಮಿಗಳು, ಪಿಂಜಾರರು, ನಾಪಿತರು, ಬುಡಕಟ್ಟು ಜನರು, ನಟರು, ನಟುವಾಂಗರು, ದೊಂಬಿದಾಸರು ಮುಂತಾದ ಕೈಉತ್ಪಾದಕ ಜನವರ್ಗಗಳು ಕರ್ನಾಟಕದಲ್ಲಿ ಇರುವುದು ನಿಮಗೆ ತಿಳಿದಿದೆ. ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು?

1) ದೇಶದ ಉತ್ಪಾದಕತೆಯಲ್ಲಿ ಶೇಕಡ ಅರವತ್ತು ಉತ್ಪಾದನೆ ನಿಭಾಯಿಸುತ್ತಿರುವ ಕೈ ಉತ್ಪಾದಕ ಜನವರ್ಗಗಳು ಏಕೆ ದರಿದ್ರರಾಗಿ ಉಳಿದಿದ್ದಾರೆ?

2) ಕೈ ಉತ್ಪನ್ನಗಳಿಗೆ ಬೆಲೆ ಸಿಕ್ಕುವಂತೆ ಮಾಡುವಲ್ಲಿ ನೀವೇಕೆ ಸೋತಿದ್ದೀರಿ?

3) ಯಂತ್ರೋದ್ಯಮವನ್ನೇಕೆ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದೀರಿ?

4) ಸಾರ್ವಜನಿಕ ವಿತರಣೆಗಾಗಿ ಅಕ್ಕಿಯನ್ನು ಮಾತ್ರವೇ ಏಕೆ ಕೊಳ್ಳುತ್ತಿದ್ದೀರಿ? ಜೋಳ, ರಾಗಿ, ಮುಂತಾದ ಸಿರಿಧಾನ್ಯಗಳು, ಎಣ್ಣೆಕಾಳು, ಇತ್ಯಾದಿ ಆಹಾರ ಪದಾರ್ಥಗಳನ್ನು, ಕೊಳ್ಳುವ ಹಾಗು ವಿತರಿಸುವ ಮೂಲಕ ಮಳೆ ಆಧಾರಿತ ಕೃಷಿಕರನ್ನೇಕೆ ಉತ್ತೇಜಿಸುತ್ತಿಲ್ಲ ನೀವು? ನೀರಾವರಿ ಕೃಷಿ, ಕೊಳವೆಭಾವಿ ಕೃಷಿ, ಪಂಪ್‌ಸೆಟ್ ಕೃಷಿ, ಪಾಲಿಹೌಸ್ ಕೃಷಿ ಇತ್ಯಾದಿ ತಂತ್ರಜ್ಞಾನ ಆಧರಿಸಿದ ಕೃಷಿ ಪದ್ಧತಿ ಮಾತ್ರವೇ ಕೃಷಿಯೇ?

5) ಕೈ ಉತ್ಪಾದಕರಿಗೆ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲೇಕೆ ವಿತರಣೆ ಮಾಡುತ್ತಿಲ್ಲ?

6) ಕೈ-ಉತ್ಪಾದಕರ ಮಾರಾಟ ಸಹಾಕಾರ ಸಂಘಗಳ ಸ್ಥಾಪನೆಗೆ ಏಕೆ ಪ್ರೊತ್ಸಾಹ ನೀಡುತ್ತಿಲ್ಲ ನೀವು?

7) ಖಾಸಗಿ ಸೂಪರ್ ಮಾರುಕಟ್ಟೆಗಳ ಬದಲಿಗೆ ಜನಪರ ಸಂತೆಗಳನ್ನೇಕೆ ಸ್ಥಾಪಿಸುತ್ತಿಲ್ಲ? ನಗರ ಪ್ರದೇಶಗಳಿಗಳಿಗೇಕೆ ವಿಸ್ತರಿಸುತ್ತಿಲ್ಲ?

8) ಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಭೂಮಿ ಇತ್ಯಾದಿ ಸಾಮುದಾಯಿಕ ಜಮೀನುಗಳನ್ನೇಕೆ ಖಾಸಗಿಕರಣಗೊಳಿಸುತ್ತಿದ್ದೀರಿ?

9) ಪಾರಂಪರಿಕ ತಂತ್ರಜ್ಞಾನಗಳ ಬಗ್ಗೆ ನೀವು ಏಕೆ ಅಸಡ್ಡೆಯನ್ನು ತೋರುತ್ತಿದ್ದೀರಿ?

10) ಕೈಉತ್ಪಾದಕ ಬಡವರನ್ನು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಏಕೆ ಒಡೆದು ಆಡುವುದನ್ನು ಮಾಡುತ್ತಿದ್ದೀರಿ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!