By Suvarna Web DeskFirst Published Feb 16, 2018, 2:00 PM IST
Highlights
ಪ್ರಸಕ್ತ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ ನೀಡಿದ್ದಾರೆ. ಇಲ್ಲಿದೆ ಬಜೆಟ್ ಹೈಲೈಟ್ಸ್:
ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ
ವಾಸ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡಲು 'ಈ ಕ್ಷಣ' ಯೋಜನೆ
ಭೂ ಮಾಪನಾ ಇಲಾಖೆ ವತಿಯಿಂದ ಐದು ಮೊಬೈಲ್ ಆ್ಯಪ್ ಗಳ ಅಭಿವೃದ್ಧಿ
ಮೂರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಟೈಟಲಿಂಗ್ ಯೋಜನೆ
ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ
2500 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ ಪಿಂಚಣಿ ಮೊತ್ತ 500 ರಿಂದ 600ಕ್ಕೆ ಏರಿಕೆ
ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು 576 ಕೋಟಿ ವೆಚ್ಚ
ರುದ್ರಭೂಮಿಗಳಿಗೆ ಜಮೀನು ಖರೀದಿ ಮಾಡಲು 10 ಕೋಟಿ
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಾಫಿ ಬೆಳೆದಿರುವವರಿಗೆ 10 ಎಕರೆವರೆಗೆ ಗುತ್ತಿಗೆ ನೀಡಲು ನಿಯಮ
ಕಾವೇರಿ ತಂತ್ರಾಂಶವನ್ನು ಬಿಬಿಎಂಪಿಯ ಜಿಐಎಸ್ ಡಾಟಾ ಬೇಸ್ ಜೊತೆ ಸಂಯೋಜನೆಗೆ 3 ಕೋಟಿ
ಹವಾಮಾನ ಮುನ್ಸೂಚನೆ ಮತ್ತು ಸಿಡಿಲು ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್ ಅಭಿವೃದ್ಧಿ
ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಶನ ಮಾಡಲು 20 ಕೋಟಿ
ತಿರುಮಲದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ