ಇಂಧನ ಇಲಾಖೆ ಹಗರಣ; ಶೋಭಾ ಕರಂದ್ಲಾಜೆಯಿಂದ ಸರ್ಕಾರಕ್ಕೆ 1,046 ಕೋಟಿ ನಷ್ಟ..?

Published : Nov 21, 2017, 05:50 PM ISTUpdated : Apr 11, 2018, 12:41 PM IST
ಇಂಧನ ಇಲಾಖೆ ಹಗರಣ; ಶೋಭಾ ಕರಂದ್ಲಾಜೆಯಿಂದ ಸರ್ಕಾರಕ್ಕೆ 1,046 ಕೋಟಿ ನಷ್ಟ..?

ಸಾರಾಂಶ

ವಿದ್ಯುತ್ ಖರೀದಿ ಗುತ್ತಿಗೆಯನ್ನು ಮೊದಲು JSW ಎನರ್ಜಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಬಳಿಕ ಆ ಗುತ್ತಿಗೆ ರದ್ದುಪಡಿಸಿ ಮತ್ತೆ ಅದೇ ಕಂಪನಿಗೆ ಅದೇ ಗುತ್ತಿಗೆ ನೀಡಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಬೆಂಗಳೂರು(ನ.21): ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1,046 ಕೋಟಿ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಇಂಧನ ಇಲಾಖೆ ಹಗರಣದ ಕುರಿತ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ವಿದ್ಯುತ್ ಖರೀದಿ ಗುತ್ತಿಗೆಯನ್ನು ಮೊದಲು JSW ಎನರ್ಜಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಬಳಿಕ ಆ ಗುತ್ತಿಗೆ ರದ್ದುಪಡಿಸಿ ಮತ್ತೆ ಅದೇ ಕಂಪನಿಗೆ ಅದೇ ಗುತ್ತಿಗೆ ನೀಡಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಬಿಎಸ್'ವೈ ನೇತೃತ್ವದ ಸಭೆಯ ನಿರ್ಧಾರದಿಂದಲೇ ಸರ್ಕಾರಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ಇಂಧನ ಇಲಾಖೆ ಹಗರಣದ ಕುರಿತು ತನಿಖೆ ನಡೆಸಿದ ಸಮಿತಿ ವರದಿ ಮಂಡನೆ ಮಾಡಿದೆ.

2014ರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದ 8 ಜನರ ಸದನ ಸಮಿತಿಯ ತಂಡ 2010ರಿಂದ 2014ರವರೆಗೆ ವಿದ್ಯುತ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿತ್ತು. ಜಿಂದಾಲ್ ಸಂಸ್ಥೆಯಿಂದ ಪ್ರತಿ ಯೂನಿಟ್'ಗೆ 3.50 ರುಪಾಯಿ ನೀಡಲು ಸಚಿವೆ ಶೋಭಾ ಕರಂದ್ಲಾಜೆ ಒಪ್ಪಿಕೊಂಡಿತ್ತು. ಆ ಬಳಿಕ ಅದೇ ಕಂಪನಿಗೆ ಪ್ರತಿ ಯೂನಿಟ್'ಗೆ 6.20 ರುಪಾಯಿಯಂತೆ ಸರ್ಕಾರ ಗುತ್ತಿಗೆ ನೀಡಿತ್ತು. ಈ ನಿರ್ಧಾರದಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ