ಬೆಂಗಳೂರಿನಲ್ಲಿ ಮತ್ತೊಂದು ಫೈರಿಂಗ್

Published : Feb 28, 2017, 04:56 PM ISTUpdated : Apr 11, 2018, 01:10 PM IST
ಬೆಂಗಳೂರಿನಲ್ಲಿ ಮತ್ತೊಂದು ಫೈರಿಂಗ್

ಸಾರಾಂಶ

ಕೊಮ್ಮಘಟ್ಟ ಮಂಜ, ಕುಖ್ಯಾತ ಸರಗಳ್ಳ ದರೋಡೆಕೊರನಾಗಿದ್ದು, 5 ತಿಂಗಳಿಂದ ಜೈಲುಪಾಲಾಗಿದ್ದ.

ಬೆಂಗಳೂರು(ಫೆ.28): ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಫೈರಿಂಗ್ ನಡೆದಿದೆ. ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ ಈಗ ಪೊಲೀಸರು ಕಳ್ಳನ ಮೇಲೆ ಫೈರಿಂಗ್ ನಡೆಸಿದ್ದಾರೆ.

ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕಳ್ಳನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಹೆಸರುಘಟ್ಟದ ಆಚಾರ್ಯ ಕಾಲೇಜು ಬಳಿ ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕೊಮ್ಮಘಟ್ಟ ಮಂಜ ಎಂಬಾತನ ಮೇಲೆ ವಿದ್ಯಾರಣ್ಯಪುರ ಇನ್ಸ್​ಪೆಕ್ಟರ್ ಪುನೀತ್​ ಫೈರ್ ಮಾಡಿದ್ದಾರೆ.

ಗಾಯಗೊಂಡ  ಈತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಮ್ಮಘಟ್ಟ ಮಂಜ, ಕುಖ್ಯಾತ ಸರಗಳ್ಳ ದರೋಡೆಕೊರನಾಗಿದ್ದು, 5 ತಿಂಗಳಿಂದ ಜೈಲುಪಾಲಾಗಿದ್ದ. ಇಂದು ಜಾಮೀನಿನ ಮೇಲೆ ಹೊರ ಬಂದಿದ್ದ ಈತ ಸರಗಳ್ಳತನಕ್ಕೆ ಇಳಿದಿದ್ದ ಈತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್