ಎಂಜಿ ರೋಡ್'ನಲ್ಲಿ ಪಾನಮತ್ತ ಪೋಲಿಗಳಿಂದ ಹೆಣ್ಮಕ್ಕಳಿಗೆ ಕಾಮಚೇಷ್ಟೆ; ಹುಡುಗಿಯರು ಕಣ್ಣೀರಿಟ್ಟರೂ ಕೈಕಟ್ಟಿ ನಿಂತ ಪೊಲೀಸರು

Published : Jan 02, 2017, 11:43 AM ISTUpdated : Apr 11, 2018, 12:44 PM IST
ಎಂಜಿ ರೋಡ್'ನಲ್ಲಿ ಪಾನಮತ್ತ ಪೋಲಿಗಳಿಂದ ಹೆಣ್ಮಕ್ಕಳಿಗೆ ಕಾಮಚೇಷ್ಟೆ; ಹುಡುಗಿಯರು ಕಣ್ಣೀರಿಟ್ಟರೂ ಕೈಕಟ್ಟಿ ನಿಂತ ಪೊಲೀಸರು

ಸಾರಾಂಶ

ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿದ್ದ ನಗರದ ಹಾಟ್​ ಸ್ಪಾಟ್​  ಎಂಜಿ ರೋಡ್'​ನಲ್ಲಿ ರಾತ್ರಿ ಯುವಪೀಳಿಗೆಯ ದಂಡೇ ಜಮಾಯಿಸಿತ್ತು. ಆದ್ರೆ ಹಿಂದೆಂದೂ ಕಂಡು ಕೇಳರಿಯದಂತ ಹೇಯ ಕೃತ್ಯ ನಡೆದು ರಾಷ್ಟ್ರಮಟ್ಟದಲ್ಲಿ ಸಿಲಿಕಾನ್​ ಸಿಟಿಯ ಮಾನ ಹರಾಜಾಗಿದೆ.. ಪೊಲೀಸ್ ಭದ್ರತೆ ವೈಫಲ್ಯದತ್ತ ಇಡೀ ಯುವಪೀಳಿಗೆಯೇ ಬೊಟ್ಟು ಮಾಡಿ ತೋರಿಸ್ತಿದೆ.. ಹಾಗಾದ್ರೆ ಆಗಿದ್ದೇನು?  ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೈಲ್ಸ್..

ಬೆಂಗಳೂರು(ಜ. 02): ಅದೆಷ್ಟೋ ಯುವ ಮನಸ್ಸುಗಳು ರಾತ್ರಿ ಪಾರ್ಟಿ, ಮೋಜು ಮಸ್ತಿಯ ಗುಂಗಿನಲ್ಲಿದ್ರು. ಹೊಸ ವರ್ಷ ಸ್ವಾಗತಕ್ಕೆ ಎಂಜಿ ರೋಡ್​ ಅನ್ನೋ ಮಾಯಾ ಪ್ರಪಂಚದಲ್ಲಿ ಸಜ್ಜಾಗಿ ನಿಂತಿದ್ರು. ಆದ್ರೆ ಲಕ್ಷಾಂತರ ಜನ ಸೇರುವ ಈ ಮಾಯಾ ಪ್ರಪಂಚದಲ್ಲಿ ಯುವತಿಯರಿಗೆ ಸೇಫ್ಟಿಯೇ ಇರಲಿಲ್ಲ. ಕಿಡಿಗೇಡಿಗಳ ಕಾಟದಿಂದ ಯುವತಿಯರ ಸಂಭ್ರಮಾಚರಣೆಗೆ ತಣ್ಣೀರೆರಚಿದ್ದು ಸುಳ್ಳಲ್ಲ..

ಸಂಭ್ರಮಾಚರಣೆಯ ಗುಂಪಲ್ಲಿ ಕುಚೇಷ್ಟೆ ಮಾಡಿದ್ರೆ ಪೊಲೀಸರಿಗೆ ಗೊತ್ತಾಗಲ್ಲ ಅನ್ನೋ ಭಂಡ ಧೈರ್ಯದಿಂದ ಪುಂಡರು ಹೆಣ್ಮಕ್ಕಳನ್ನ ಎಳೆದಾಡಿದ್ದಾರೆ.. ಮೈಕೈ ಮುಟ್ಟಿ ಚಪಲ ತೀರಿಸಿಕೊಂಡಿದ್ದಾರೆ. ಹುಡುಗಿಯರಿಗೆ ಕಣ್ಣೀರು ಹಾಕಿಸಿದ್ದಾರೆ.. ಆದ್ರೆ ಪೊಲಿಸರು ಸರಿಯಾದ ಭದ್ರೆತೆಯೊಂದಿಗೆ ಸಿಸಿಟಿವಿ ಪರಿಶೀಲಿಸಿ ಕೇಸ್​ ಜಡಿದಿದ್ರೆ ಅದೆಷ್ಟೋ ಪ್ರಕರಣಗಳು ಬಯಲಿಗೆ ಬರ್ತಿದ್ವು .ಆದ್ರೆ ಇಂತಹ ಘಟನೆಗಳು ನಡೆದರೂ ಸ್ಥಳದಲ್ಲಿದ್ದ ಪೊಲೀಸರು ಮೌನವಹಿಸಿದ್ದರು. ಅಲ್ಲಿದ್ದ ಪೊಲೀಸರು ಮಾತ್ರ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಲಕ್ಷಾಂತರ ಜನರ ಮಧ್ಯೆಯೇ ಹೆಣ್ಮಕ್ಕಳನ್ನ ಹಿಡಿದು ಎಳೆದಾಡಿದ ಈ ಘಟನೆಗೆ ಎಂಜಿ ರೋಡ್​ ಸಾಕ್ಷಿಯಾಯ್ತು ಅಂದ್ರೆ ಅಲ್ಲಿ ಭದ್ರತೆ ವೈಫಲ್ಯವಲ್ಲದೇ ಬೇರೇನೂ ಅಲ್ಲ... ನಿನ್ನೆ ನಡೆದ ಪೊಲೀಸ್ ಇಲಾಖೆಯ ಟ್ರಾನ್ಸ್​'ಫರ್, ಆಯುಕ್ತರ ಬದಲಾವಣೆಯಿಂದ ಭದ್ರತಾ ಸಿಬ್ಬಂದಿ ಸರಿಯಾದ ಭದ್ರತೆ ಕೈಗೊಳ್ಳಲಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಭದ್ರತೆಯ ವೈಫಲ್ಯವನ್ನೂ ಪೊಲೀಸರಲ್ಲಿ ಯಾರೂ ಹೊರಲು ಸಿದ್ಧರಿಲ್ಲ. ತಾನು ಇನ್ನೂ ಅಧಿಕಾರ ವಹಿಸಿಕೊಂಡಿರಲಿಲ್ಲ ಎಂದು ನೂತನ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಪ್ರತಿಕ್ರಿಯಿಸಿದ್ದಾರೆ. ಹಿಂದಿನ ಕಮಿಷನರ್ ಮೇಘರಿಕ್ ತಾನು ಕರ್ತವ್ಯದಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ, ವೈಫಲ್ಯದ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ರಾಮರಾಜ್ಯದ ಕನಸು ಹೊತ್ತಿದ್ದ ಮಹಾತ್ಮರು ಮಧ್ಯರಾತ್ರಿಯಲ್ಲೂ ಒಂಟಿ ಮಹಿಳೆ ಒಡಾಡುವಂತಾಗಲಿ ಅನ್ನೋ ಆಶಯ ಇಟ್ಕೊಂಡಿದ್ರು. ಆದ್ರೆ ಲಕ್ಷಾಂತರ ಜನ ಇದ್ದ ಜಾಗದಲ್ಲೇ ಯುವತಿಯರಿಗೆ ರಕ್ಷಣೆ ಇಲ್ಲದಂತೆ ಆಗಿದ್ದು ಮಾತ್ರ ಶೋಚನೀಯ.  ಇದು ಪೊಲೀಸರಿಂದಲೇ ಆದ ಕಾನೂನು ಸುವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆಯಲ್ಲದೇ ಬೇರೇನೂ ಅಲ್ಲ.

- ಅಭಿಷೇಕ್​ ಜೈಶಂಕರ್,​ ಕ್ರೈಂ ಬ್ಯುರೋ ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!