ಸುವರ್ಣ ನ್ಯೂಸ್ 'ರಿಂಗ ರಿಂಗಾ' ವರದಿ ಬಳಿಕ ಲೈವ್ ಬ್ಯಾಂಡ್ ಪಬ್'ಗಳು ಕ್ಲೋಸ್;ಪೊಲೀಸ್ ಆಯುಕ್ತರಿಂದ ಅಧಿಕಾರಿಗಳ ತುರ್ತು ಸಭೆ

Published : Nov 21, 2017, 09:25 AM ISTUpdated : Apr 11, 2018, 12:44 PM IST
ಸುವರ್ಣ ನ್ಯೂಸ್ 'ರಿಂಗ ರಿಂಗಾ' ವರದಿ ಬಳಿಕ ಲೈವ್ ಬ್ಯಾಂಡ್ ಪಬ್'ಗಳು ಕ್ಲೋಸ್;ಪೊಲೀಸ್ ಆಯುಕ್ತರಿಂದ ಅಧಿಕಾರಿಗಳ ತುರ್ತು ಸಭೆ

ಸಾರಾಂಶ

ಲೇಡಿಸ್ ಬಾರ್ ಹೆಸರಲ್ಲಿ ಲೈವ್ ಬ್ಯಾಂಡ್ ದಂಧೆಯ ಕರಾಳ ಚಿತ್ರಣವನ್ನು ಸುವರ್ಣನ್ಯೂಸ್ ಬಯಲಿಗೆ ಎಳೆದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿದೆ.ಸುದ್ದಿ ಪ್ರಸಾರ ಆಗುತ್ತಿದ್ದಂತೆ ದಂಧೆಯ ಪಬ್'ಗಳೆಲ್ಲಾ ಬಾಗಿಲು ಮುಚ್ಚಿ ಮನೆ ಕಡೆ ಹೆಜ್ಜೆ ಹಾಕಿದರೆ ಇತ್ತ ಕಮಿಷನರ್ ಸುನೀಲ್ ಕುಮಾರ್  ತುರ್ತು ಸಭೆ ಕರೆದರು.  

ಬೆಂಗಳೂರು (ನ.21): ಲೇಡಿಸ್ ಬಾರ್ ಹೆಸರಲ್ಲಿ ಲೈವ್ ಬ್ಯಾಂಡ್ ದಂಧೆಯ ಕರಾಳ ಚಿತ್ರಣವನ್ನು ಸುವರ್ಣನ್ಯೂಸ್ ಬಯಲಿಗೆ ಎಳೆದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿದೆ.ಸುದ್ದಿ ಪ್ರಸಾರ ಆಗುತ್ತಿದ್ದಂತೆ ದಂಧೆಯ ಪಬ್'ಗಳೆಲ್ಲಾ ಬಾಗಿಲು ಮುಚ್ಚಿ ಮನೆ ಕಡೆ ಹೆಜ್ಜೆ ಹಾಕಿದರೆ ಇತ್ತ ಕಮಿಷನರ್ ಸುನೀಲ್ ಕುಮಾರ್  ತುರ್ತು ಸಭೆ ಕರೆದರು.  

ಸುವರ್ಣನ್ಯೂಸ್ ಎಕ್ಲೂಸಿವ್ ಸ್ಟಿಂಗ್ ಆಪರೇಶನ್ 'ರಿಂಗ... ರಿಂಗಾ ವರದಿ ನಿನ್ನೆ ಸಂಜೆ 7 ಕ್ಕೆ ಪ್ರಸಾರವಾಗುತ್ತಲೇ ದಂಧೆಗಳು ನಡೆಯುತ್ತಿದ್ದ ಏರಿಯಾದಲ್ಲಿನ ಠಾಣೆಗಳ ಫೋನ್​ಗಳು ಕೂಡ ರಿಂಗಣಿಸಲಾರಂಭಿಸಿದವು. ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯ ವರದಿಯಲ್ಲಿ ಬಿತ್ತರವಾಗಿದ್ದ ಅಷ್ಟೂ  ಪಬ್'ಗಳು ಕ್ಲೋಸ್ ಆಗಿಬಿಟ್ಟವು. ಮೊದಲಿಗೆ ಸ್ಟಿಂಗ್ ಆಪರೇಷನ್'ನ ವರದಿ ಪ್ರಸಾರ ಆಗುತ್ತಿದ್ದಂತೆ ರಿಧಮ್ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ಸಂಪಂಗಿ ರಾಮನಗರ ಪೊಲೀಸರು ಧಿಡೀರ್ ದಾಳಿ ನಡೆಸಿದರು.  ಇಷ್ಟು ಆಗುತ್ತಿದ್ದಂತೆ  ಬ್ರಿಗೇಡ್ ರಸ್ತೆಯ ಬ್ರಿಗೇಡ್ ಡ್ರೀಮ್ಸ್ , ಎಂಜಿ ರಸ್ತೆಯ ನಕ್ಷತ್ರ ಪಬ್ ಧಿಡೀರ್ ಕ್ಲೋಸ್ ಮಾಡಿದವು.

ತುರ್ತು  ಅಧಿಕಾರಿಗಳ ಸಭೆ ಕರೆದ ಪೊಲೀಸ್ ಆಯುಕ್ತರು

ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಪ್ರಸಾರ ಆಗುತ್ತಿದ್ದಂತೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಆವ್ರ ಜೊತೆ ತುರ್ತು ಸಭೆಯನ್ನು ನಡೆಸಿದರು.   ಅಕ್ರಮವಾಗಿ ನಡೆಯುತ್ತಿರುವ ಲೈವ್ ಬ್ಯಾಂಡ್ ವಿರುದ್ಧ ಕ್ರಮಕ್ಕೆ ತಾಕೀತು ಮಾಡಿದರು. ಲೇಡಿಸ್ ಬಾರ್ ಹೆಸರಲ್ಲಿ ಲೈವ್' ಬ್ಯಾಂಡ್ ನಡೆಸುತ್ತಿರುವವರ ವಿರುದ್ಧ ಸುವರ್ಣನ್ಯೂಸ್ ಸಮರ ಪೊಲೀಸ್ ವಲಯದಲ್ಲೇ ಹೊಸ ಸಂಚಲನ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ