ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದಾಲದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಆಗ್ರಾ,[ಜ.09]: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೋದಿ ಸರ್ಕಾರ, ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ನೀಡಿ ಭೇಷ್ ಎನಿಸಿಕೊಂಡಿದೆ.
ಇನ್ನು ಈ ಬಗ್ಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಮೀಸಲಾತಿ ಬೇಕಾಗಿತ್ತು. ನಾನು ಸಿಎಂ ಆಗಿದ್ದಾಗಲೇ ಈ ಬಗ್ಗೆ ಹೇಳಿದ್ದೆ ಈಗ ಮಾಡಿದ್ದೇನೆ ಎಂದು ಸಾರಿ ಸಾರಿ ಹೇಳಿದರು.
ಮೇಲ್ವರ್ಗ ಮೀಸಲಾತಿ ಪಡೆಯಲು 3 ಮಾನದಂಡಗಳು, ಯಾರಿಗೆ ಲಾಭ? ಇಲ್ಲಿದೆ ಮಾಹಿತಿ
ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ರಾಜಕೀಯ ಇಲ್ಲ. ಮೀಸಲಾತಿ ಕೊಡಿಸುವ ವಿಚಾರದಲ್ಲಿ ಲಾಭ-ನಷ್ಟದ ಮಾತಿಲ್ಲ ಎಂದು ಪ್ರಧಾನಿ ಮಂತ್ರಿ ಮೋದಿ ಸ್ಪಷ್ಟನೆ ನೀಡಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಆಡಳಿತದ ಆತ್ಮವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಹಕ್ಕು ನೀಡಲು ಈ ಬಿಲ್ ಜಾರಿ ತರಲಾಗಿದೆ.
ಮೋದಿ ಮೀಸಲು ಅಸ್ತ್ರ: ಇಲ್ಲಿದೆ ಮಾಸ್ಟರ್ ಸ್ಟ್ರೋಕ್ನ ಕಂಪ್ಲೀಟ್ ಲೆಕ್ಕಾಚಾರ!
ಶೇಕಡ 10ರ ವಿಧೇಯಕದ ಬಗ್ಗೆ ರಾಜಕೀಯ ಮಾಡಲೇಬೇಡಿ ಎಂದು ಪ್ರತಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ಕುಟುಕಿದರು.