ಪಾಕ್‌ಗೆ ನೀರು ನಿಲ್ಲಿಸುವೆ: ಪ್ರಧಾನಿ ಮೋದಿ ಅಚ್ಚರಿಯ ಘೋಷಣೆ!

Published : Oct 15, 2019, 08:12 PM IST
ಪಾಕ್‌ಗೆ ನೀರು ನಿಲ್ಲಿಸುವೆ: ಪ್ರಧಾನಿ ಮೋದಿ ಅಚ್ಚರಿಯ ಘೋಷಣೆ!

ಸಾರಾಂಶ

ಪಾಕಿಸ್ತಾನಕ್ಕೆ ಭಾರತದಿಂದ ಹರಿಯುವ ನೀರು ನಿಲ್ಲಿಸುವುದಾಗಿ ಹೇಳಿದ ಪ್ರಧಾನಿ| ಹರಿಯಾಣ, ರಾಜಸ್ಥಾನದ ನೀರು ಪಾಕ್‌ಗೆ ಹರಿಯದಂತೆ ಕ್ರಮ ಕೈಗೊಳ್ಳುವ ಭರವಸೆ| ಹರಿಯಾಣಧ ಚರ್ಕಿ ದಾದ್ರಿಯಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ| ಪಾಕಿಸ್ತಾನಕ್ಕೆ ನೀರು ನಿಲ್ಲಿಸಿ ನಿಮ್ಮ ಮನೆಗಳಿಗೆ ನೀರು ತರುವುದಾಗಿ ಹೇಳಿದ ಪ್ರಧಾನಿ| ರೈತರ ಹೊಲಗಳಿಗೆ ನೀರು ಹರಿಸುವುದಾಗಿ ಪ್ರಧಾನಿ ಭರವಸೆ| 'ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ'|

ಚರ್ಕಿ ದಾದ್ರಿ(ಅ.15): ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಶೀಘ್ರದಲ್ಲೇ ಮತ್ತೊಮ್ಮೆ ಸೂಕ್ತ ಪಾಠ ಕಲಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಹರಿಯಾಣದ ಚಕ್ರಿ ದಾದ್ರಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆ ಹಿಡಿಯಲು ತಮ್ಮ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿದರು.

ಕಳೆದ 70 ವರ್ಷಗಳಿಂದ ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ ನೀರು ಪಾಕಿಸ್ತಾನಕ್ಕೆ ಹರಿದಿದೆ. ಆದರೆ ನಿಮ್ಮ ಮೋದಿ ಸರ್ಕಾರ ಈ ನೀರು ಪಾಕ್‌ಗೆ ಹರಿಯುವುದನ್ನು ತಡೆದು ನಿಮ್ಮ ಮನೆಗಳಿಗೆ ಹರಿಸಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ. ಹೀಗಾಗಿ ಈ ನೀರು ಪಾಕ್‌ಗೆ ಹರಿಯುವುದನ್ನು ತಡೆದು ನಿಮ್ಮ ಹೊಲಗಳಿಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ನುಡಿದರು.

ತಮಿಳುನಾಡಿನಲ್ಲಿ ಚೀನಾ ಅಧ್ಯಕ್ಷರೊಂದಿಗೆ ನಡೆದ ಅನೌಪಚಾರಿಕ ಶೃಂಗಸಭೆ ಕುರಿತು ಉಲ್ಲೇಖಿಸಿದ ಪ್ರಧಾನಿ, ಕ್ಸಿ ದಂಗಲ್ ಸಿನಿಮಾವನ್ನು ತುಂಬ ಮೆಚ್ಚಿಕೊಂಡಿದ್ದು, ಭಾರತದ ಹೆಣ್ಣುಮಕ್ಕಳ ಅದ್ಭುತ ಪ್ರದರ್ಶನವನ್ನು ಮೆಚ್ಚಿದ್ದಾರೆ ಎಂದದು ಹೇಳಿದರು. ಚೆನ್ನಾಗಿ ಬಿಂಬಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಬಬಿತಾ ಪೋಗಟ್ ಹರಿಯಾಣಧ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ವಿಶೇಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!