ಮೋದಿಯಿಂದ ಗುಜರಾತ್’ಗೆ ಬಂಪರ್ ಕೊಡುಗೆ; ದೇಶದ ಮೊದಲ 'ರೋ-ರೋ' ಸಮುದ್ರಯಾನ ಸೇವೆ ಆರಂಭ

Published : Oct 22, 2017, 09:11 PM ISTUpdated : Apr 11, 2018, 12:57 PM IST
ಮೋದಿಯಿಂದ ಗುಜರಾತ್’ಗೆ ಬಂಪರ್ ಕೊಡುಗೆ; ದೇಶದ ಮೊದಲ 'ರೋ-ರೋ' ಸಮುದ್ರಯಾನ ಸೇವೆ ಆರಂಭ

ಸಾರಾಂಶ

ಇದೇ ವರ್ಷ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಗುಜರಾತ್​ ಚುನಾವಣೆ ಗೆಲುವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನರನ್ನು ಸೆಳೆಯಲು ಮುಂದಾಗಿದೆ. ಆಗ್ನೇಯ ಏಷ್ಯಾದಲ್ಲಿ ಹೆಗ್ಗುರುತಿನ ಯೋಜನೆಗೆ ಮೋದಿ ಇಂದು ಚಾಲನೆ ನೀಡಿ ಚುನಾವಣೆ ರಣಕಹಳೆ ಮೊಳಗಿಸಿದರು.

ಗಾಂಧಿನಗರ (ಅ.22): ಇದೇ ವರ್ಷ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಗುಜರಾತ್​ ಚುನಾವಣೆ ಗೆಲುವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನರನ್ನು ಸೆಳೆಯಲು ಮುಂದಾಗಿದೆ. ಆಗ್ನೇಯ ಏಷ್ಯಾದಲ್ಲಿ ಹೆಗ್ಗುರುತಿನ ಯೋಜನೆಗೆ ಮೋದಿ ಇಂದು ಚಾಲನೆ ನೀಡಿ ಚುನಾವಣೆ ರಣಕಹಳೆ ಮೊಳಗಿಸಿದರು.

ಗುಜರಾತ್​ಗೆ ಬಂಪರ್​ ಕೊಡುಗೆ

ಗುಜರಾತ್​ ಚುನಾವಣೆ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರಕಾರ ಬಂಪರ್​ ಕೊಡುಗೆ ನೀಡಿದೆ. ಸೌರಾಷ್ಟ್ರದ ಘೋಘಾದಿಂದ ದಕ್ಷಿಣ ಗುಜರಾತ್’ನ ದಹೇಜ್ ಸಂಪರ್ಕಿಸುವ 'ರೋ-ರೋ' ಸಮುದ್ರಯಾನ ಸೇವೆ ಮೊದಲ ಹಂತದ ಯೋಜನೆಗೆ ಪ್ರಧಾನಿ ಮೋದಿ ನರೇಂದ್ರ ರಿಮೋಟ್​ ಕಂಟ್ರೋಲ್​ ಮೂಲಕ ಚಾಲನೆ ನೀಡಿದರು. ಗುಜರಾತ್​ನಲ್ಲಿ ಪ್ರಧಾನಿ 1140 ಕೋಟಿ ವೆಚ್ಚದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ, "ಇದು ಆಗ್ನೇಯ ಏಷ್ಯಾದಲ್ಲಿ ಒಂದು ಹೆಗ್ಗುರುತಿನ ಯೋಜನೆ. ಈ ಬಗೆಯ ಸೇವೆ ಮೊದಲನೆಯದು. ಇದು ಗುಜರಾತ್‌ ಜನರ ಕನಸು. ನಾನು ರಾಜ್ಯ ಸರಕಾರಕ್ಕೆ ಅಭಾರಿ" ಎಂದರು.

ಪ್ರಧಾನಿಯಾದ ಮೇಲೆ ಮೋದಿ ಈವರೆಗೆ 19 ಬಾರಿ ಗುಜರಾತ್​​ಗೆ ಭೇಟಿ ನೀಡಿದ್ದಾರೆ. ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಮೋದಿ ಇದೇ ತಿಂಗಳು 3 ಬಾರಿ ಭೇಟಿ ನೀಡಿದ್ದಾರೆ.  ಜತೆಗೆ ವಡೋದರಾದಲ್ಲಿ 14 ಕಿಮೀ ಭರ್ಜರಿ ರೋಡ್​ ಶೋ ನಡೆಸಿದ್ರು. ಒಟ್ಟಿನಲ್ಲಿ ಗುಜರಾತ್​ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಬಹುದೊಡ್ಡ ಸವಾಲಾಗಿದ್ದು, ಪದೇ ಪದೇ ಗುಜರಾತ್​ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ನಡೆ ಮಾತ್ರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು