ಉತ್ತಮ ವಿದ್ಯುತ್ ಸರಬರಾಜಿಗೆ ಯೋಗಿ ಆದಿತ್ಯನಾಥ್ ಮಾಸ್ಟರ್'ಪ್ಲಾನ್

Published : Apr 07, 2017, 10:20 AM ISTUpdated : Apr 11, 2018, 12:45 PM IST
ಉತ್ತಮ ವಿದ್ಯುತ್ ಸರಬರಾಜಿಗೆ ಯೋಗಿ ಆದಿತ್ಯನಾಥ್ ಮಾಸ್ಟರ್'ಪ್ಲಾನ್

ಸಾರಾಂಶ

* ಬಡತನ ರೇಖೆಗಿಂತ ಮೇಲಿರುವ ಸಾಮಾನ್ಯ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನೂರು ಪ್ರತಿಶತ ಹಣಕಾಸು ನೆರವು * ಜಾತಿ, ಮತ ಭೇದವಿಲ್ಲದೇ, ಇತ್ತೀಚಿನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧಾರದ ಮೇಲೆ ವಿದ್ಯುತ್ ಸಂಪರ್ಕ. * ವಿದ್ಯುತ್ ಕಳ್ಳತನ ತಡೆಗಟ್ಟಲು ಸಕಲ ರೀತಿಯಲ್ಲಿ ಪ್ರಚಾರ. ವಿದ್ಯುತ್ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆ ತರಲು ಯೋಜನೆ

ಲಕ್ನೋ(ಏ. 07): ಉತ್ತರಪ್ರದೇಶದಲ್ಲಿನ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಿರುವ ಯೋಗಿ ಆದಿತ್ಯನಾಥ್ ಈಗ ವಿದ್ಯುತ್ ಇಲಾಖೆಯಲ್ಲಿ ಒಂದಷ್ಟು ಸುಧಾರಣೆ ತರಲು ಯತ್ನಿಸಿದ್ದಾರೆ. ರಾಜ್ಯದಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಪುಷ್ಟಿ ನೀಡಲು ಮಾಸ್ಟರ್'ಪ್ಲಾನ್ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೈಗೊಂಡ, ಕೈಗೊಳ್ಳಲಿರುವ ಕ್ರಮಗಳು ಹಾಗೂ ಆದೇಶಗಳು ಇಲ್ಲಿವೆ.

* ನೂರು ದಿನದಲ್ಲಿ 5 ಲಕ್ಷ ಹೊಸ ವಿದ್ಯುತ್ ಸಂಪರ್ಕ

* ಹಳೆಯ ಟ್ರಾನ್ಸ್'ಫಾರ್ಮರ್'ಗಳನ್ನು ಬದಲಿಸಲು ಆದೇಶ. ನಗರ ಪ್ರದೇಶದಲ್ಲಿಲ 24 ಗಂಟೆಯೊಳಗೆ, ಹಾಗೂ ಗ್ರಾಮೀಣ ಪ್ರದೇಶದಲ್ಲಿ 48 ಗಂಟೆಯೊಳಗೆ ಹೊಸ ಟ್ರಾನ್ಸ್'ಫಾರ್ಮರ್'ನ ವ್ಯವಸ್ಥೆಯಾಗಬೇಕೆಂದು ಆದೇಶ

* ಗ್ರಾಮೀಣ ಭಾಗದಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲು ಆದೇಶ

* ಏ.14ರಿಂದ ಗ್ರಾಮೀಣ ಭಾಗದಲ್ಲಿ ದಿನಕ್ಕೆ ಕನಿಷ್ಠ 18 ಗಂಟೆವರೆಗೆ ವಿದ್ಯುತ್ ವ್ಯವಸ್ಥೆ

* ಬಡ ಬಿಪಿಎಲ್ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

* ಬಡತನ ರೇಖೆಗಿಂತ ಮೇಲಿರುವ ಸಾಮಾನ್ಯ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನೂರು ಪ್ರತಿಶತ ಹಣಕಾಸು ನೆರವು

* ಜಾತಿ, ಮತ ಭೇದವಿಲ್ಲದೇ, ಇತ್ತೀಚಿನ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧಾರದ ಮೇಲೆ ವಿದ್ಯುತ್ ಸಂಪರ್ಕ.

* ವಿದ್ಯುತ್ ಕಳ್ಳತನ ತಡೆಗಟ್ಟಲು ಸಕಲ ರೀತಿಯಲ್ಲಿ ಪ್ರಚಾರ. ವಿದ್ಯುತ್ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆ ತರಲು ಯೋಜನೆ.

* ಸ್ಮಾರ್ಟ್'ಮೀಟರಿಂಗ್ ಅಳವಳಿಕೆ

* ವಿದ್ಯುತ್ ಬಿಲ್ ಬಾಕಿಯ ಮೇಲಿನ ಬಡ್ಡಿ ಮನ್ನಾ. ಅಸಲಿ ಮೊತ್ತದ ಪಾವತಿಗೆ ಇಎಂಐ ಅವಕಾಶ.

* ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿ ಸರಕಾರಿ ಅಧಿಕಾರಿಯ ಕೈಲಿಲ್ಲ ಸಂಪೂರ್ಣ ಅಧಿಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?