ಕರೆಂಟ್ ವೈರ್ ಕಳವು ಮಾಡಿದ್ದಕ್ಕೆ ಕರೆಂಟ್ ಶಾಕ್ ನೀಡಿಯೇ ಹತ್ಯೆ

Published : Aug 22, 2017, 09:21 AM ISTUpdated : Apr 11, 2018, 12:36 PM IST
ಕರೆಂಟ್ ವೈರ್ ಕಳವು ಮಾಡಿದ್ದಕ್ಕೆ ಕರೆಂಟ್ ಶಾಕ್ ನೀಡಿಯೇ ಹತ್ಯೆ

ಸಾರಾಂಶ

ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮಬಂಗಾಳ 20 ವರ್ಷದ ಬಶೀರ್ ಕೊಲೆಯಾದವ.

ಬೆಂಗಳೂರು(ಆ.22): ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮಬಂಗಾಳ 20 ವರ್ಷದ ಬಶೀರ್ ಕೊಲೆಯಾದವ.

ಮೂರು  ತಿಂಗಳ ಹಿಂದೆಯಷ್ಟೆ ಪಶ್ಚಿಮಬಂಗಾಳದಿಂದ ನಗರಕ್ಕೆ ಕೆಲಸಕ್ಕೆಂದು ಬಂದಿದ್ದ ಬಶೀರ್ ಹಾಗೂ ಕುಟುಂಬ ಮಾರತ್ ಹಳ್ಳಿ ಯ ವಾಗ್ದೇವಿ ಶಾಲೆ ಬಳಿ ವಾಸವಿತ್ತು. ಪೇಪರ್ ಹಾಯೋ ಕೆಲಸ ಮಾಡುತ್ತಿದ್ದ  ಬಾಶೀರ್ ಕುಟುಂಬ ಬಸುರೆಡ್ಡಿ ಜಮೀನಿನಲ್ಲಿ ವಾಸವಿತ್ತು. ಜಮೀನಿನಲ್ಲಿ ಹಾದುಹೋಗಿದ್ದ ಕರೆಂಟ್ ವೈರ್  ಕದ್ದಿದ್ದಾನೆ ಎಂದು ಜಮೀನಿನ ಮಾಲೀಕ ಬಸುರೆಡ್ಡಿ ಮತ್ತು ಸ್ನೇಹಿತರು ಇಂದು ಬಶೀರ್ ನನ್ನು ರೂಮಿನೊಳಗೆ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ, ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆಂದು ಎಂಬುದು ಬಶೀರ್ ಕುಟುಂಬಸ್ಥರ ಆರೋಪ.

ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!