
ನವದೆಹಲಿ(ಆ.17): ಸ್ವಾತಂತ್ರ್ಯೋತ್ಸವದಂದು ಪ್ರಿಯಾಂಕಾ ಚೋಪ್ರಾ ಕೂಡಾ ತನ್ನ ಇನ್ಸಾಗ್ರಾಂನಲ್ಲಿ ತ್ರಿವರ್ಣ ಧ್ವಜದಲ್ಲಿರುವ ಬಣ್ಣಗಳಿಂದ ಕೂಡಿದ ಶಾಲೊಂದನ್ನು ಕುತ್ತಿಗೆಗೆ ಹಾಕಿ, ಪ್ರೀತಿಯಿಂದ ಹಾರಿಸುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಕೆಲವರು ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿ, ಪ್ರಿಯಾಂಕಾ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಧ್ವನಿ ಎತ್ತಿದ್ದಾರೆ.
ಅಶೋಕ ಚಕ್ರವಿಲ್ಲದೇ ತ್ರಿವರ್ಣ ಧ್ವಜವಿರುವುದಿಲ್ಲ ಎಂದು ಕೆಲವರು ಆಕ್ಷೇಪವೆತ್ತಿದ್ದರೆ ಮತ್ತೆ ಕೆಲವರು ಇದೆಲ್ಲವೂ ಪ್ರಿಯಾಂಕಾ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ. ಅಲ್ಲದೇ ಅವರ ದೇಶಭಕ್ತಿಯ ಮೇಲೂ ಜನರು ಬೊಟ್ಟು ಮಾಡಿದ್ದಾರೆ ಹಾಗೂ ಅವರು ಈ ವಿಚಾರಕ್ಕಾಗಿ ಕ್ಷಮೆ ಯಾಚಿಸಬೇಕೆಂದು ಕೇಳಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ. ಪ್ರಿಯಾಂಕಾ ಕೂಡಾ ಈ ರೀತಿ ಆಚರಿಸಿದ್ದಾರೆ ಆದರೆ ಜನರು ಮಾತ್ರ ಈ ವಿಚಾರದಲ್ಲೂ ತಪ್ಪು ಹುಡುಕುವಲ್ಲಿ ಎಡವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.