ತಾಳಗುಪ್ಪವರೆಗೆ ಇಂಟರ್'ಸಿಟಿ ರೈಲು ವಿಸ್ತರಿಸಲು ಮನವಿ

Published : Aug 17, 2017, 01:45 PM ISTUpdated : Apr 11, 2018, 01:12 PM IST
ತಾಳಗುಪ್ಪವರೆಗೆ ಇಂಟರ್'ಸಿಟಿ ರೈಲು ವಿಸ್ತರಿಸಲು ಮನವಿ

ಸಾರಾಂಶ

ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಎ.ಕೆ. ಗುಪ್ತ, ರೈಲ್ವೆ ವೇಳಾಪಟ್ಟಿಯನ್ನು ಹಾಗೂ ಸಮಯದ ಸ್ಥಿತಿಗತಿಯನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಇಂಟರ್'ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾಗರ(ಆ.17): ಶಿವಮೊಗ್ಗಕ್ಕೆ ಬರುವ ಇಂಟರ್'ಸಿಟಿ ರೈಲು ತಾಳಗುಪ್ಪವರೆಗೂ ವಿಸ್ತರಿಸುವಂತೆ ಈಚೆಗೆ ತಾಳಗುಪ್ಪಕ್ಕೆ ಭೇಟಿ ನೀಡಿದ್ದ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಎ.ಕೆ. ಗುಪ್ತಗೆ ರೈಲ್ವೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಬೆಂಗಳೂರಿನಿಂದ ಬರುವ ಇಂಟರ್'ಸಿಟಿ ರೈಲು ಶಿವಮೊಗ್ಗದಲ್ಲಿ ನಿಲುಗಡೆ ಮಾಡಲಾಗುತ್ತಿದೆ. ತಾಳಗುಪ್ಪ ಮತ್ತು ಸಾಗರ ಪ್ರಯಾಣಿಕರು ಇಂಟರ್'ಸಿಟಿ ಮೂಲಕ ಬೆಂಗಳೂರಿಗೆ ಹೋಗಲು ಸಾಕಷ್ಟು ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನಿಲುಗಡೆ ಮಾಡುವ ಇಂಟರ್'ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ತಕ್ಷಣವೇ ಇಂಟರ್'ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಎ.ಕೆ. ಗುಪ್ತ, ರೈಲ್ವೆ ವೇಳಾಪಟ್ಟಿಯನ್ನು ಹಾಗೂ ಸಮಯದ ಸ್ಥಿತಿಗತಿಯನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಇಂಟರ್'ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ವಿಲಿಯಂ, ಉಪಾಧ್ಯಕ್ಷ ಮೂಗಿಮನೆ ಗಣಪತಿ ಹೆಗಡೆ, ಕಾರ್ಯದರ್ಶಿ ಕುಮಾರಸ್ವಾಮಿ ಮುಂತಾದವರು ಹಾಜರಿದ್ದರು.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ
ನಾಟಕ ಕಲಾವಿದೆ, ಹಾಸ್ಯಮಯ ವೀಡಿಯೋ ಮೂಲಕ ಎಲ್ಲರ ನಗುತ್ತಿದ್ದ ಕರಾವಳಿಯ ಆಶಾ ಪಂಡಿತ್ ಇನ್ನಿಲ್ಲ