
ಅಹಮದಾಬಾದ್(ನ.08): ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ ಬೆನ್ನಲ್ಲೇ, ಗುಜರಾತಿನ ಅತಿದೊಡ್ಡ ನಗರ ಅಹಮದಾಬಾದ್ ಹೆಸರನ್ನು ‘ಕರ್ಣವತಿ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.
ಕಾನೂನಿನ ಅಡೆತಡೆ ಎದುರಿಸುವಷ್ಟುಜನ ಬೆಂಬಲ ದೊರೆತಲ್ಲಿ ಅಹಮದಾಬಾದ್ ಹೆಸರನ್ನು ಕರ್ಣವತಿ ಮಾಡಲು ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಗಿಮಿಕ್. ಹಿಂದುಗಳ ಮತ ಗಿಟ್ಟಿಸಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ, ಅಹಮದಾಬಾದ್ಗೆ ಹೆಸರನ್ನು ಕರ್ಣವತಿ ಎಂದು ಬದಲಿಸುವುದಾಗಿ ಬಿಜೆಪಿ ಹೇಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ತಿಳಿಸಿದ್ದಾರೆ.
ಚಾಲುಕ್ಯರ ಅರಸ ಕರ್ಣ ಎಂಬಾತ ಸಾಬರಮತಿ ನದಿ ದಂಡೆಯಲ್ಲಿ ಕರ್ಣವತಿ ಎಂಬ ನಗರ ನಿರ್ಮಿಸಿದ್ದ. ಆನಂತರ 1411ರಲ್ಲಿ ಬಂದ ಸುಲ್ತಾನ್ ಅಹಮದ್ ಶಾ ಎಂಬಾತ ಕರ್ಣವತಿ ಸಮೀಪವೇ ಹೊಸ ನಗರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ. ಅಲ್ಲಿ ಅಹಮದ್ ಎಂಬ ನಾಲ್ವರು ಸಂತರು ಇದ್ದ ಹಿನ್ನೆಲೆಯಲ್ಲಿ ಆ ನಗರಕ್ಕೆ ಅಹಮದಾಬಾದ್ ಎಂದು ನಾಮಕರಣ ಮಾಡಿದ್ದ ಎಂಬ ಐತಿಹ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.