
ವಿಶಾಖಪಟ್ಟಣ(ನ.08): ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕ ಮುಪ್ಪಳ ಲಕ್ಷ್ಮಣರಾವ್ ಅಲಿಯಾಸ್ ಗಣಪತಿ (72), ನಾಯಕತ್ವದಿಂದ ಕೆಳಗಿಳಿದ್ದಾರೆ. ತೀವ್ರ ಮಂಡಿನೋವಿನಿಂದ ಬಳಲುತ್ತಿರುವ ಕಾರಣ ಸಂಘಟನೆಯ ನಾಯಕತ್ವ ಮತ್ತು ಗೆರಿಲ್ಲಾ ಕಾರ್ಯಾಚರಣೆಯಿಂದ ಹಿಂದೆ ಸರಿಯಲು ಗಣಪತಿ ನಿರ್ಧರಿಸಿದ್ದಾರೆ.
ಗಣಪತಿ ಅವರ ನಿರ್ಧಾರವನ್ನು ಸಂಘಟನೆ ಕೂಡಾ ಮಾನ್ಯ ಮಾಡಿದೆ ಎಂದು ಮೂಲಗಳು ತಿಳಿಸಿವೆ. ತೀವ್ರ ಮಂಡಿನೋವಿಗೆ ಹೋಮಿಯೋಪತಿ ಚಿಕಿತ್ಸೆ ಪಡೆಯುತ್ತಿದ್ದ ಗಣಪತಿ, ಅಲೋಪತಿ ಚಿಕಿತ್ಸೆ ಪಡೆಯಲು ನಗರಕ್ಕೆ ತೆರಳುವುದು ಸಾಧ್ಯವಿಲ್ಲದ ಕಾರಣ, ಸಕ್ರಿಯ ಚಟುವಟಿಕೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಹೀಗಾಗಿ ಅವರ ಸ್ಥಾನಕ್ಕೆ ನಂಬಲ್ಲ ಕೇಶವ ರಾವ್ ಅಲಿಯಾಸ್ ಬಸವ ರಾಜ್ ಅವರನ್ನು ನೇಮಿಸಲಾಗಿದೆ. ಜೊತೆಗೆ ಸಂಘಟನೆಯ ಕೇಂದ್ರೀಯ ಸಮಿತಿಗೆ ಹೊಸದಾಗಿ 6 ಜನರನ್ನು ಸೇರ್ಪಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.