ಕಮಲ್ ಹಾಸನ್ ಥರದವರನ್ನು ಗುಂಡಿಕ್ಕಿ ಕೊಲ್ಲಿ ಎಂದ ಹಿಂದೂ ಮಹಾಸಭಾ ನಾಯಕ

Published : Nov 04, 2017, 10:15 PM ISTUpdated : Apr 11, 2018, 12:45 PM IST
ಕಮಲ್ ಹಾಸನ್ ಥರದವರನ್ನು ಗುಂಡಿಕ್ಕಿ ಕೊಲ್ಲಿ ಎಂದ ಹಿಂದೂ ಮಹಾಸಭಾ ನಾಯಕ

ಸಾರಾಂಶ

ಕಮಲ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 500,522,298,295(ಎ) ಹಾಗೂ 505(ಸಿ) ಅಡಿ ವಕೀಲ ಕಮಲೇಶ್ ಚಂದ್ರ ತ್ರಿಪಾಠಿ ದೂರು ದಾಖಲಿಸಿದ್ದಾರೆ.

ಚೆನ್ನೈ(ನ.04): ಹಿಂದೂಗಳನ್ನು ಅವಹೇಳನ ಮಾಡುವ ನಟ ಕಮಲ್ ಹಾಸನ್ ಥರದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಹಿರಿಯ ನಾಯಕ ಅಶೋಕ್ ಶರ್ಮಾ ವಿವಾದ ಸೃಷ್ಟಿಸಿದ್ದಾರೆ.

ಇತ್ತೀಚಿಗಷ್ಟೆ ತಮುಳಿನ ವಾರಪತ್ರಿಕೆಯೊಂದರಲ್ಲಿ 'ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿರುವ  ಮಹಾಸಭಾದ ನಾಯಕ ಅಶೋಕ್ ಶರ್ಮಾ 'ಕಮಲ್ ಹಾಸನ್ ಥರದವರನ್ನು  ನೇಣಿಗೇರಿಸಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕೆ ವಿನಃ ನಿಯಂತ್ರಿಸಲು ಮತ್ಯಾವುದೇ ದಾರಿಯಿಲ್ಲ' ಎಂದು' ಹೇಳಿದ್ದಾರೆ.

ಶರ್ಮಾ ಅವರು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಗಿದ್ದಾರೆ. ಅಲ್ಲದೆ ಈ ಮಹಾಸಭಾದ ಸದಸ್ಯರು ಕಮಲ್ ಹಾಸನ್  ಹಾಗೂ ಅವರ ಪುತ್ರಿ ಅಭಿನಯದ ಚಿತ್ರಗಳನ್ನು ಬಹಿಷ್ಕರಿಸಿದ್ದಾರೆ.ಅಲ್ಲದೆ ಈ ರೀತಿ ಹೇಳಿಕೆ ನೀಡುವ ಕಲಾವಿದರ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಸಹ ತಿಳಿಸಿದೆ.

ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವಾರಣಾಸಿಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ಮುಂದಿನ ಹಂತದ ವಿಚಾರಣೆ ನವೆಂಬರ್ 22ರಂದು ನಡೆಯಲಿದೆ. ಕಮಲ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 500,522,298,295(ಎ) ಹಾಗೂ 505(ಸಿ) ಅಡಿ ವಕೀಲ ಕಮಲೇಶ್ ಚಂದ್ರ ತ್ರಿಪಾಠಿ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ