ಬಿಜೆಪಿಯ ಪರಿವರ್ತನಾ ರಾಲಿಯಲ್ಲಿ ಅಚಾತುರ್ಯ: ಈಶ್ವರಪ್ಪ ವಿರುದ್ಧ ಸಿಟ್ಟಾದ ಸವಿತಾ ಸಮಾಜ

Published : Nov 04, 2017, 09:05 PM ISTUpdated : Apr 11, 2018, 01:11 PM IST
ಬಿಜೆಪಿಯ ಪರಿವರ್ತನಾ ರಾಲಿಯಲ್ಲಿ ಅಚಾತುರ್ಯ: ಈಶ್ವರಪ್ಪ  ವಿರುದ್ಧ ಸಿಟ್ಟಾದ ಸವಿತಾ ಸಮಾಜ

ಸಾರಾಂಶ

ಬಿಜೆಪಿಯ ಪರಿವರ್ತನಾ ರಾಲಿ ಹಿನ್ನೆಲೆಯಲ್ಲಿ ಶುಕ್ರವಾರ ಹೆಬ್ಬೂರಿನಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅಚಾತುರ್ಯ ಮಾಡಿದ್ದಾರೆ

ತುಮಕೂರು(ನ.04): ಸವಿತಾ ಸಮಾಜದವರನ್ನು ‘ಹಜಾಮರು’ ಎನ್ನುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿವಾದಕ್ಕೆ ಸಿಲುಕಿದ್ದಾರೆ.

‘ಹಜಾಮರು’ ಪದ ಬಳಸದಂತೆ ಸರ್ಕಾರದಿಂದಲೇ ಆದೇಶವಿದೆ. ಆದರೆ, ಬಿಜೆಪಿಯ ಪರಿವರ್ತನಾ ರಾಲಿ ಹಿನ್ನೆಲೆಯಲ್ಲಿ ಶುಕ್ರವಾರ ಹೆಬ್ಬೂರಿನಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅಚಾತುರ್ಯ ಮಾಡಿದ್ದಾರೆ. ‘ನಾನು ಇಂಧನ ಸಚಿವನಾಗಿದ್ದಾಗ ಗುಜರಾತಿಗೆ ಹೋಗಿದ್ದೆ. ಅಲ್ಲಿನ ಪ್ರತಿ ಗ್ರಾಮದ ಮೂಲೆ ಮೂಲೆಯಲ್ಲೂ ವಿದ್ಯುತ್ ಇತ್ತು. ಒಂದು ಹಳ್ಳಿಯ ‘ಹಜಾಮರ’ ಶಾಪ್‌ಗೆ ಹೋಗಿದ್ವಿ. ಅಲ್ಲೂ ನಿರಂತರ ವಿದ್ಯುತ್ ಸಂಪರ್ಕವಿತ್ತು’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸವಿತಾ ಸಮಾಜದ ಮುಖಂಡರು ಆಕ್ಷೇಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ