ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಅವರು ಕೊಪ್ಪಳದ ಕನಕಗಿರಿಯ ಕನಕಚಲಪತಿ ದೇವಸ್ಥಾನಕ್ಕೆ ಬಸ್'ನಲ್ಲಿ ಆಗಮಿಸುವಾಗ ಅಲ್ಲಿ ನೆರೆದಿದ್ದ ಯುವಕರು ಮೋದಿ, ಮೋದಿ ಎಂದು ಘೋಷಣೆ ಕೂಗುವುದರ ಮೂಲಕ ರಾಗಾ ಗೆ ಮುಜುಗರ ಉಂಟಾಗುವಂತೆ ಮಾಡಿದರು.
ಕೊಪ್ಪಳ(ಫೆ.11): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮೋದಿ ಮೇನಿಯಾದ ಬಿಸಿ ತಟ್ಟಿದೆ.
ಹೌದು, ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಅವರು ಕೊಪ್ಪಳದ ಕನಕಗಿರಿಯ ಕನಕಚಲಪತಿ ದೇವಸ್ಥಾನಕ್ಕೆ ಬಸ್'ನಲ್ಲಿ ಆಗಮಿಸುವಾಗ ಅಲ್ಲಿ ನೆರೆದಿದ್ದ ಯುವಕರು ಮೋದಿ, ಮೋದಿ ಎಂದು ಘೋಷಣೆ ಕೂಗುವುದರ ಮೂಲಕ ರಾಗಾ ಗೆ ಮುಜುಗರ ಉಂಟಾಗುವಂತೆ ಮಾಡಿದರು.
ನಾಲ್ಕುದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ನಿನ್ನೆ ಬಳ್ಳಾರಿಗೆ ಭೇಟಿ ನೀಡಿದ್ದರು. ಇಂದು ಕನಕಗಿರಿಯ ಕನಕಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ,
ಹೀಗಿತ್ತು ಆ ಕ್ಷಣ....