ಸ್ಟುಡಿಯೋದಲ್ಲಿ ಬದಲಾಗುತ್ತೆ ಫೋಟೋ: ಬೋರ್ವೆಲ್ ಹಣ ಪಡೆಯಲು ಪಿಡಿಓ, ಉಪಾಧ್ಯಕ್ಷನ ತಂತ್ರ

Published : Nov 23, 2016, 09:37 PM ISTUpdated : Apr 11, 2018, 12:58 PM IST
ಸ್ಟುಡಿಯೋದಲ್ಲಿ ಬದಲಾಗುತ್ತೆ ಫೋಟೋ: ಬೋರ್ವೆಲ್ ಹಣ ಪಡೆಯಲು ಪಿಡಿಓ, ಉಪಾಧ್ಯಕ್ಷನ ತಂತ್ರ

ಸಾರಾಂಶ

ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ, ಬೋರ್‌ವೆಲ್ ಕೊರೆಸಲು ಹಣ ನೀಡುತ್ತದೆ. ಆದರೆ ಈ ಹಣ ಅರ್ಹ ರೈತನಿಗೆ ತಲುಪುವುದೇ ಇಲ್ಲ. ಸರ್ಕಾರದ ಹಣ ಪಡೆಯಲು ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತದೆ ನಕಲಿ ಬಿಲ್ ಸೃಷ್ಟಿಸುವ ದಂಧೆ. ಗ್ರಾಮ ಪಂಚಾಯತ್ ಪಿಡಿಓ ಹಾಗೂ ಉಪಾಧ್ಯಕ್ಷನ ಜೇಬಿಗೆ ಸೇರುತ್ತದೆ ಲಕ್ಷ ಲಕ್ಷ ಹಣ.

ಬೀದರ್(ನ.24): ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ, ಬೋರ್‌ವೆಲ್ ಕೊರೆಸಲು ಹಣ ನೀಡುತ್ತದೆ. ಆದರೆ ಈ ಹಣ ಅರ್ಹ ರೈತನಿಗೆ ತಲುಪುವುದೇ ಇಲ್ಲ. ಸರ್ಕಾರದ ಹಣ ಪಡೆಯಲು ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತದೆ ನಕಲಿ ಬಿಲ್ ಸೃಷ್ಟಿಸುವ ದಂಧೆ. ಗ್ರಾಮ ಪಂಚಾಯತ್ ಪಿಡಿಓ ಹಾಗೂ ಉಪಾಧ್ಯಕ್ಷನ ಜೇಬಿಗೆ ಸೇರುತ್ತದೆ ಲಕ್ಷ ಲಕ್ಷ ಹಣ.

ಬೀದರ್ ಜಿಲ್ಲೆಯ ಕಮಲನಗರ ಗ್ರಾಮ ಪಂಚಾಯತ್‌ನ  14 ನೇ ಹಣಕಾಸು ಯೋಜನೆ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದ್ದು, ಫೋಟೋಶಾಪ್‌'ನಲ್ಲಿ ಹಳೆ ಫೋಟೊವೊಂದನ್ನು ಎಡಿಟ್ ಮಾಡಿ ಹೊಸ ಸ್ವರೂಪ ನೀಡಿ ಇಂತಹ ಕೆಲಸ ಮಾಡಲಾಗುತ್ತಿದೆ. ಇನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಲು ಗೈಡ್ ಮಾಡುವವರು ಬೇರೆ ಯಾರೂ ಅಲ್ಲ  ಪಂಚಾಯತಿ ಉಪಾಧ್ಯಕ್ಷ. 

ಹಳೆ ಬೋರ್​ವೆಲ್​ ಫೋಟೋಗಳನ್ನ ಎಡಿಟ್​ ಮಾಡಿ ಹೊಸ ಬೋರ್​ವೆಲ್​ ಕೊರೆಸಲಾಗಿದೆ ಎಂದು ತೋರಿಸಿ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ಪಿಡಿಓ, ಉಪಾಧ್ಯಕ್ಷ  ಇಬ್ಬರೂ  ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಂಚಾಯತ್​'ಗೆ ಬರುವ ಅನುದಾನವನ್ನು ನುಂಗಿ ನೀರು ಕುಡಿದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಗ್ರಾಮ ಪಂಚಾಯತ್ ಪಿಡಿಓ ಸುಭಾಷ್ ಮತ್ತು ಗ್ರಾ.ಪಂ ಉಪಾಧ್ಯಕ್ಷ ಸಂತೋಷ ಬಿರಾದರ, ನಕಲಿ ದಾಖಲೆ ಸೃಷ್ಟಿಸಿ 60 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಗೋಲ್ ಮಾಲ್ ಮಾಡಿದ್ದಾರೆ. ಇವ್ರ ದಂಧೆಗೆ ಹಿರಿಯ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಇದನ್ನು ಕೇಳಲು ಹೋದವರಿಗೆ ಈ ಲೂಟಿಕೋರರು ಜೀವ ಬೆದರಿಕೆ ಹಾಕುತ್ತಾರಂತೆ.

ಒಟ್ಟಿನಲ್ಲಿ ಗ್ರಾಮ ಪಂಚಾಯತನಲ್ಲಿ ಹೀಗೆ ಫೋಟೋಗಳು ಎಡಿಟ್ ಮಾಡಿ 60 ಲಕ್ಷ ಅನುದಾನ ಜೇಬಿಗೆ ಇಳಿಸಿಕೊಂಡಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳ ಈ ಲೂಟಿಕೋರರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದಂಧೆಗೆ ಬ್ರೇಕ್ ಹಾಕಬೇಕಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರು
ದುರಂಧರ್ ಸ್ಟೈಲ್‌ನಲ್ಲಿ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನಿ ಲೇಡಿ ಸ್ಪೈ; ವಿಡಿಯೋ ಭಾರೀ ವೈರಲ್!