
ನೋಯ್ಡಾ: ಇ ವ್ಯಾಲೆಟ್ ಸೇವೆ ಒದಗಿಸುವ ಪೇಟಿಎಂನ ರಹಸ್ಯ ಮಾಹಿತಿ ಕದ್ದು, ಅದನ್ನು ಬಹಿರಂಗ ಮಾಡದೇ ಇರುವುದಕ್ಕೆ ಕಂಪನಿ ಮಾಲೀಕರಿಂದಲೇ 20 ಕೋಟಿ ರು. ಹಣ ಸುಲಿಗೆಗೆ ಯತ್ನಿಸಿದ ಪೇಟಿಎಂನ ಮೂವರನ್ನು ಸೋಮವಾರ ಬಂಧಿಸಲಾಗಿದೆ.
ಪೇಟಿಎಂನ ಸಂಸ್ಥಾಪಕ ವಿಜಯ ಶೇಖರ್ ಶರ್ಮಾರ ಕಾರ್ಯದರ್ಶಿಯಾಗಿದ್ದ ಮಹಿಳೆ ಮತ್ತು ಇತರೆ ಇಬ್ಬರು, ಇತ್ತೀಚೆಗೆ ಪೇಟಿಎಂನ ವೈಯಕ್ತಿಕ ಮಾಹಿತಿ ಮತ್ತು ರಹಸ್ಯ ಮಾಹಿತಿಗಳನ್ನು ಕಳವು ಮಾಡಿದ್ದರು.
ಬಳಿಕ ಶರ್ಮಾಗೆ ಕರೆ ಮಾಡಿದ್ದ ಮೂವರು, ಈ ಮಾಹಿತಿ ಬಯಲು ಮಾಡದೇ ಇರಲು 20 ಕೋಟಿಗೆ ಬೇಡಿಕೆ ಇಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.