ಮೋದಿಗೆ ಆಘಾತ, ಪ್ರಮುಖ ಮಿತ್ರ ಪಕ್ಷವೊಂದು ಮಹಾಘಟಬಂಧನ್ ತೆಕ್ಕೆಗೆ

Published : Dec 20, 2018, 05:00 PM ISTUpdated : Dec 20, 2018, 05:18 PM IST
ಮೋದಿಗೆ ಆಘಾತ, ಪ್ರಮುಖ ಮಿತ್ರ ಪಕ್ಷವೊಂದು ಮಹಾಘಟಬಂಧನ್ ತೆಕ್ಕೆಗೆ

ಸಾರಾಂಶ

ಪಂಚ ರಾಜ್ಯಗಳ ಫಲಿತಾಂಶದ ನಂತರ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ನಿಧಾನವಾಗಿ ಆರಂಭವಾಗಿದೆ. ಎನ್‌ಡಿಎಯಿಂದ ದೂರವಾಗಿದ್ದ ಶಿವಸೇನೆ ಮತ್ತೆ ಹಳೆ ದೋಸ್ತಿ ಬೆಸೆಯುವ ಮಾತನ್ನಾಡುತ್ತಿದೆ. ಆದರೆ ಇನ್ನೊಂದು ಕಡೆ ಎನ್‌ಡಿಎ ಜತೆಗೆ ಇರುವ ಪ್ರಮುಖ ಪಕ್ಷ ವೊಂದು ದೂರ ಸರಿಯಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದೆ.

ನವದೆಹಲಿ[ಡಿ.20]  ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎಗೆ ವಿರುದ್ಧವಾಗಿ ಸಂಘಟಿತವಾಗುತ್ತಿರುವ ಮಹಾಘಟಬಂಧನ್‌ಗೆ ಎನ್‌ಡಿಎ ಜತೆ ಇದ್ದ ಪಕ್ಷವೊಂದು ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ರಾಮ್ ವಿಲಾಸ್ ಅವರ ಲೋಕ ಜನಶಕ್ತಿ ಪಾರ್ಟಿ ಸಹ ಬಿಜೆಪಿಯೊಂದಿಗಿನ ಸಖ್ಯ ಕಡಿದುಕೊಳ್ಳುವ ಸಂದೇಶ ರವಾನಿಸಿದೆ. ರಾಷ್ಟ್ರೀಯ ಲೋಕ ಸಮತಾ ಪಾರ್ಟಿ[ಆರ್‌ಎಲ್ ಎಸ್‌ಪಿ]  ಮುಖ್ಯಸ್ಥ ಉಪೇಂಧ್ರ ಖುಷ್ವಾಲಾ ಮಹಾಘಟಬಂಧನ್‌ ಜತೆ ಸೇರಲಿದ್ದಾರೆ. ಡಿಸೆಂಬರ್ 10 ರಂದು ಎನ್‌ಡಿಎ ಜತೆ ನಂಟು ಕಳೆದುಕೊಂಡಿರುವ ಆರ್‌ಎಲ್ ಎಸ್‌ಪಿ ಕಾಂಗ್ರೆಸ್ ಒಕ್ಕೂಟದ ಜತೆ ಹೋದರೆ ಬಿಜೆಪಿಗೆ ಬಿಹಾರದಲ್ಲಿ ಹಿನ್ನಡೆ ಆಗುವುದೆಂತೂ ಖಚಿತ.

ದೂರವಾಗಿರುವ ಹಳೆ ಸದೋಸ್ತಿ ಮತ್ತೆ ಬಿಜೆಪಿ ಜತೆಗೆ..ಕಂಡಿಶನ್ ಏನು?

ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮಹಾಘಟಬಂಧನ್ ಜತೆ ಸೇರಿಕೊಳ್ಳುವ ಸಂಬಂಧ ಆರ್‌ಜೆಡಿ ಸಹ ಪ್ರತಿಕ್ರಿಯೆ ನೀಡಿದೆ.  ಮಹಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯನ್ನು ಈಗಲೇ ಘೋಷಿಸಲು ಸಾಧ್ಯವಿಲ್ಲ ಎಂದು ಇನ್ನೊಂದು ಕಡೆ ಬಿಎಸ್‌ಪಿಯ ಮಾಯಾವತಿ ಹೇಳಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ  ವಿವಿಧ  ಪಕ್ಷಗಳು ತಮ್ಮ ತಮ್ಮ ಸ್ಟಾಂಡ್ ತೆಗೆದುಕೊಳ್ಳುತ್ತಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ