ಸಿಗರೇಟ್ ಸೇದ್ತಿನಿ ಅಂದವನನ್ನು ಗೆಟ್ ಔಟ್ ಎಂದ ವಿಮಾನ ಸಂಸ್ಥೆ!

Published : Dec 22, 2018, 06:40 PM IST
ಸಿಗರೇಟ್ ಸೇದ್ತಿನಿ ಅಂದವನನ್ನು ಗೆಟ್ ಔಟ್ ಎಂದ ವಿಮಾನ ಸಂಸ್ಥೆ!

ಸಾರಾಂಶ

ಟೇಕ್ ಆಫ್ ಆದ ವಿಮಾನದಲ್ಲಿ ಧೂಮಪಾನ ಮಾಡಲು ಮುಂದಾದ ಪ್ರಯಾಣಿಕ| ಪ್ರಯಾಣಿಕನನ್ನು ಮಾರ್ಗ ಮಧ್ಯೆಯೇ ಇಳಿಸಿ ಹೊರಟ ವಿಮಾನ| ಟಾಟಾ ಸನ್ಸ್ ಒಡೆತನದ ವಿಸ್ತಾರ ವಿಮಾನ ಸಂಸ್ಥೆ| ಅಮೃತಸರ-ದೆಹಲಿ-ಕೋಲ್ಕತ್ತಾ ನಡುವಿನ ವಿಮಾನದಲ್ಲಿ ಘಟನೆ| ವಿಮಾನವನ್ನು ವಾಪಸ್ ದೆಹಲಿಗೆ ಇಳಿಸಿ ಪ್ರಯಾಣಿಕನನ್ನು ಹೊರ ಹಾಕಿದ ಸಿಬ್ಬಂದಿ

ನವದೆಹಲಿ(ಡಿ.22): ಟೇಕ್ ಆಫ್ ಆದ ವಿಮಾನದಲ್ಲಿ ಧೂಮಪಾನ ಮಾಡಲು ಮುಂದಾದ ಪ್ರಯಾಣಿಕನನ್ನು, ಮಾರ್ಗಮಧ್ಯದಲ್ಲೇ ಟಾಟಾ ಸನ್ಸ್ ಒಡೆತನದ ವಿಸ್ತಾರ ವಿಮಾನ ಸಂಸ್ಥೆ ಕೆಳಗಿಳಿಸಿದ ಘಟನೆ ನಡೆದಿದೆ . 

ಅಮೃತಸರ-ದೆಹಲಿ-ಕೋಲ್ಕತ್ತಾ (ಯುಕೆ 946-ಯುಕೆ 707) ವಿಮಾನದಲ್ಲಿ ಈ ಘಟನೆ ನಡೆದಿದ್ದು, ಎರಡು ಕಾರಣಗಳಿಂದಾಗಿ ವಿಮಾನ 1.5 ಗಂಟೆ ತಡವಾಗಿ ನಿಗದಿತ ಸ್ಥಳವನ್ನು ತಲುಪಿದೆ. 

ಮೊದಲನೆ ಘಟನೆಯಲ್ಲಿ ಕುಟುಂಬವೊಂದು ತುರ್ತು ಅಗತ್ಯವಿದ್ದ ಕಾರಣ ದೆಹಲಿಯಲ್ಲಿ ಇಳಿದಿದ್ದರೆ, ನಂತರ ಕೋಲ್ಕತ್ತಾಗೆ ತೆರಳಬೇಕಿದ್ದ ಪ್ರಯಾಣಿಕನೋರ್ವ ಧೂಮಪಾನ ಮಾಡುವುದಾಗಿ ಕ್ಯಾತೆ ತೆಗೆದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.

ಪ್ರಯಾಣಿಕನ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಕೊನೆಗೆ ಮತ್ತೆ ದೆಹಲಿಯತ್ತ ವಿಮಾನ ತಿರುಗಿಸಿ ಆತನನ್ನು ಕೆಳಗಿಳಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು