ಶಶಿಕಲಾಗೆ ಮತ್ತೊಂದು ಶಾಕ್: ಫೋಯಸ್ ಗಾರ್ಡನ್ ಜಯಾ ಸ್ಮಾರಕವಾಗಿಸಲು ನಿರ್ಧಾರ!

Published : Feb 08, 2017, 07:39 PM ISTUpdated : Apr 11, 2018, 12:36 PM IST
ಶಶಿಕಲಾಗೆ ಮತ್ತೊಂದು ಶಾಕ್: ಫೋಯಸ್ ಗಾರ್ಡನ್ ಜಯಾ ಸ್ಮಾರಕವಾಗಿಸಲು ನಿರ್ಧಾರ!

ಸಾರಾಂಶ

ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದ ಶಶಿಕಾಲಾಗೆ ಇದೀಗ ಪನ್ನೀರ್ ಸೆಲ್ವಂ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜಯಲಲಿತಾ ನಿವಾಸ ಫೋಯಸ್ ಗಾರ್ಡ್'ನನ್ನು 'ಜಯಾ' ಸ್ಮಾರಕ ಎಂದು ಘೋಷಿಸಲು ನಿರ್ಧರಿಸುವ ಮೂಲಕ ಚಿನ್ನಮ್ಮನಿಗೆ ತಿರುಗೇಟು ನೀಡಿದ್ದಾರೆ.

ಚೆನ್ನೈ(ಫೆ.09): ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದ ಶಶಿಕಾಲಾಗೆ ಇದೀಗ ಪನ್ನೀರ್ ಸೆಲ್ವಂ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜಯಲಲಿತಾ ನಿವಾಸ ಫೋಯಸ್ ಗಾರ್ಡ್'ನನ್ನು 'ಜಯಾ' ಸ್ಮಾರಕ ಎಂದು ಘೋಷಿಸಲು ನಿರ್ಧರಿಸುವ ಮೂಲಕ ಚಿನ್ನಮ್ಮನಿಗೆ ತಿರುಗೇಟು ನೀಡಿದ್ದಾರೆ.

 ಇನ್ನು ಪನ್ನೀರ್ ಸೆಲ್ವಂ ನಿರ್ಧಾರ ಜಾರಿಯಾಗಿ ಫೋಯಸ್ ಗಾರ್ಡನ್ ಜಯಾ ಸ್ಮಾರಕ ಎಂದು ಘೋಷಣೆಯಾದರೆ, ಶಶಿಕಲಾ  ಆನಿವಾಸವನ್ನು ತೊರೆಯಬೇಕಾಗುತ್ತದೆ. ಈ ಮೂಲಕ ಶಶಿಕಲಾರನ್ನು ಜಯಾ ನಿವಾಸದಿಂದ ಹೊರಹಾಕಲು ಸಿಎಂ ಪನ್ನೀರ್ ಸೆಲ್ವಂ ತಂತ್ರ ಹೆಣೆದಿದ್ದಾರೆ.

ಇಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ Vs ಶಶಿಕಲಾ ರಾಜಕಾರಣ ತಾರಕಕ್ಕೇರಿದೆ. ಪನ್ನೀರ್ ಬೆಂಬಲಿಗರು ADIAMK ಶಾಸಕರ ಫೋನ್ ನಂಬರ್'ನ್ನು ಸಾರ್ವಜನಿಕರಿಗೆ ಹಂಚಿದ್ದು, ಶಾಸಕರಿಗೆ ಕರೆ ಮಾಡಿ ಪನ್ನೀರ್ ಸೆಲ್ವಂ ಪರ ಜನರಿಂದಲೇ ಒತ್ತಡ ಹಾಕುವಂತೆ ಮಾಡಿದ್ದಾರೆ. ಈ ಮೂಲಕ ಶಶಿಕಲಾ ಜೊತೆ ಗುರುತಿಸಿಕೊಂಡಿದ್ದ 130 ಶಾಸಕರಲ್ಲಿ ಒಡಕಾಗಿದೆ. ಕೊಲ್ಲಾಚಿ, ಕೊಯಮುತ್ತೂರು, ADIAMK ನಾಯಕರು ಈಗ ಸೆಲ್ವಂ ಬೆಂಬಲಕ್ಕೆ ನಿಂತಿದ್ದಾರೆ ಹಾಗೂ ಸಾಮಾಜಿಕ ಜಾಲಾತಾಣಗಳಾದ ಫೇಸ್'ಬುಕ್, ಟ್ವಿಟರ್ಪನ್ನೀರ್ ಪರ ಅಭಿಯಾನ ಜೋರಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?