ಭಾರತ ಬಯಸಿದರೆ ಪಾಕ್ ಮಾತುಕತೆಗೆ ಸಿದ್ಧ

Published : Nov 28, 2016, 07:28 AM ISTUpdated : Apr 11, 2018, 12:55 PM IST
ಭಾರತ ಬಯಸಿದರೆ ಪಾಕ್ ಮಾತುಕತೆಗೆ ಸಿದ್ಧ

ಸಾರಾಂಶ

ಅಮೃತಸರದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶದ ಸಂದರ್ಭ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರ ಸಿದ್ಧವಿದೆ - ಅಬ್ದುಲ್ ಬಸಿತ್

ನವದೆಹಲಿ(ನ.28): ಪಾಕಿಸ್ತಾನ ಭಾರತದೊಂದಿಗೆ ಷರತ್ತು ರಹಿತ ಮಾತುಕತೆಗೆ ಸಿದ್ಧವಿದೆ ಎಂದು ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ ವರದಿ ತಿಳಿಸಿದೆ.

ಮುಂದಿನ ವಾರ ಅಮೃತಸರದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶದ ಸಂದರ್ಭ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರ ಸಿದ್ಧವಿದೆ ಎಂದು ಬಾಸಿತ್ ಹೇಳಿದ್ದಾರೆ.

ಪಾಕ್ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರ ಕಾರ್ಯಕ್ರಮ ವೇಳಾಪಟ್ಟಿ ಅಂತಿಮಗೊಂಡಿಲ್ಲ. ಒಂದುವೇಳೆ ಆತಿಥೇಯ ರಾಷ್ಟ್ರ ಮಾತುಕತೆಯ ಪ್ರಸ್ತಾಪವನ್ನಿರಿಸಿದರೆ, ಅದನ್ನು ಪಾಕಿಸ್ತಾನ ಸ್ವೀಕರಿಸಲಿದೆ ಎಂದು ಬಾಸಿತ್ ತಿಳಿಸಿದ್ದಾರೆ.

‘‘ಮಾತುಕತೆಯನ್ನು ನಾವು ತಿಂಗಳ ಮಟ್ಟಿಗೆ ಮುಂದೂಡಬಹುದು, ವರ್ಷಗಳ ಕಾಲವೂ ಮುಂದೂಡಬಹುದು. ಆದರೆ ಅಂತಿಮವಾಗಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳಿಗೆ ಮಾತುಕತೆಯೊಂದೇ ಪರಿಹಾರ. ಎರಡೂ ರಾಷ್ಟ್ರಗಳು ಕುಳಿತುಕೊಂಡು ಎಲ್ಲ ಸಮಸ್ಯೆಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

ಡಿ. 3-4ರಂದು ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನ ನಡೆಯಲಿದೆ. ಡಿಸೆಂಬರ್ 4ರಂದು ಸರ್ತಾಜ್ ಅಜೀಜ್ ಭಾರತಕ್ಕೆ ಆಗಮಿಸಲಿದ್ದು, ಅಂದೇ ಪಾಕಿಸ್ತಾನಕ್ಕ ಮರಳಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಗ್‌ ನ್ಯೂಸ್‌, ಜಿಮೇಲ್‌ ನೇಮ್‌ ಬದಲಾಯಿಸುವ ಅವಕಾಶ ನೀಡಿದ ಗೂಗಲ್‌!
ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್; ಚಿಕ್ಕಮಗಳೂರಿನ 22 ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ!