
ನವದೆಹಲಿ/ಇಸ್ಲಾಮಾಬಾದ್(ಆ.12): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ. ಇದು ಪಾಕ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸದಾ ಯುದ್ಧದ ಕನವರಿಕೆಯಲ್ಲಿ ದಿನ ದೂಡುತ್ತಿದೆ.
ಭಾರತದ ವಿರುದ್ಧ ಯುದ್ಧ ಮಾಡುವ ಉನ್ಮಾದಲ್ಲಿರುವ ಪಾಕಿಸ್ತಾನ, ತನ್ನ ವಾಯುಸೇನೆಗೆ ಸೇರಿದ 3 ಸಿ130 ಯುದ್ಧ ವಿಮಾನಗಳನ್ನು ಗಡಿಗೆ ರವಾನಿಸಿದೆ.
ಲಡಾಖ್ ಸಮೀಪದ ಸ್ಕರ್ದು ವಾಯುನೆಲೆಗೆ ಪಾಕಿಸ್ತಾನ 3 ಸಿ130 ಯುದ್ಧ ವಿಮಾನ ರವಾನಿಸಿದ್ದು, ಇದರ ಜೊತೆಗೆ ಯುದ್ಧೋಪಕರಣಗಳನ್ನೂ ಜಮೆ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇನ್ನು ಪಾಕ್ ಸ್ಕರ್ದು ವಾಯುನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನೂ ಕಳುಹಿಸುವ ಇರಾದೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನದ ಚಲನವಲನದ ಮೇಲೆ ಭಾರತದ ಸೇನಾ ಗುಪ್ತಚರ ಸೂಕ್ಷ್ಮವಾಗಿ ಕಣ್ಣಿಟ್ಟಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.