‘ಕತ್ತಲಾಗಿದ್ದರಿಂದ ಪ್ರತಿ ದಾಳಿ ಸಾಧ್ಯವಾಗ್ಲಿಲ್ಲ’, ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ

Published : Feb 26, 2019, 08:07 PM IST
‘ಕತ್ತಲಾಗಿದ್ದರಿಂದ ಪ್ರತಿ ದಾಳಿ ಸಾಧ್ಯವಾಗ್ಲಿಲ್ಲ’, ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ

ಸಾರಾಂಶ

ಪಾಕಿಸ್ತಾನದ ಮೇಲಿನ ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ! ಪಾಕಿಸ್ತಾನದ ರಕ್ಷಣಾ ಸಚಿವನ ಉತ್ತರ ನೋಡಿದಿರಾ..? ನೀವ್ಯಾಕೆ ಭಾರತದ ಮೇಲೆ ಪ್ರತಿ ದಾಳಿ ಮಾಡಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆ! ಪತ್ರಕರ್ತರ ಪ್ರಶ್ನೆಗೆ ನಗೆಪಾಟಲಿನ ಉತ್ತರ ಕೊಟ್ಟ ಪಾಕಿಸ್ತಾನ ರಕ್ಷಣಾ ಸಚಿವ.

ನವದೆಹಲಿ, [ಫೆ, 26]: ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ಸರ್ಜಿಕಲ್ ದಾಳಿಗೆ ಉಗ್ರರ ನೆಲೆಗಳು ಪುಡಿ-ಪುಡಿಯಾಗಿವೆ.

ಉಗ್ರರು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಭಾರತ ಉಡೀಸ್ ಮಾಡಿದ್ದು, ಪಾಕ್ ಗೆ ಮುಟ್ಟಿ ನೋಡಿಕೊಳ್ಳವಂತಾಗಿದೆ.

ಟೊಮ್ಯಾಟೋಗೆ ಬಾಂಬ್ ನಿಂದ ಉತ್ತರಿಸ್ತೇವೆ: ಜೋಕರ್ ಆದ ಪಾಕ್ ಪತ್ರಕರ್ತ!

ಇನ್ನು ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪಾಕಿಸ್ತಾನದ ರಕ್ಷಣಾ ಪರ್ವೀಜ್​ ಕಟಕ್​ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅಪಹಾಸ್ಯಕ್ಕೀಡಾಗಿದ್ದಾರೆ.

ಟ್ರೋಲ್ ಆಯ್ತು ಪಾಕಿಸ್ತಾನ, ಸಂಭ್ರಮಾಚರಣೆ ನಡುವೆ ನಗುವಿನ ಗುಳಿಗೆ

ನೀವ್ಯಾಕೆ ಭಾರತದ ಮೇಲೆ ಪ್ರತಿ ದಾಳಿ ಮಾಡಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ನಮ್ಮ ವಾಯುಸೇನೆ ಸಿದ್ಧವಾಗಿತ್ತು, ಆದ್ರೆ ಕತ್ತಲಾಗಿದ್ದರಿಂದ ದಾಳಿ ಸಾಧ್ಯವಾಗಲಿಲ್ಲ ಎನ್ನುವ ಉತ್ತರ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಒಂದಲ್ಲ, ಎರಡಲ್ಲ... ಯೋಧರ ದಾಳಿಗೆ ಬರೋಬ್ಬರಿ 25 ಜೈಷ್ ಕಮಾಂಡರ್‌ಗಳು ಮಟಾಶ್!

ಸೋಮವಾರ ತಡರಾತ್ರಿ ಭಾರತೀಯ ವಾಯುಸೇನೆ, ಸುಮಾರ 70 ಕಿ.ಮೀ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಕ್ಯಾಂಪ್ ಗಳ ಮೇಲೆ ಸಾವಿರ ಕೆ.ಜಿ.ಬಾಂಬ್ ಹಾಕಿ ಯಶಸ್ವಿಯಾಗಿ ಮರಳಿದೆ. ಈ ಮೂಲಕ ಪುಲ್ವಾಮಾ ದಾಳಿಯ ಸೇಡು ತೀರಿಸಿಕೊಂಡಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ