ಶ್ರೀನಗರ(ಸ.03): ಸರ್ಜಿಕಲ್ ದಾಳಿಯಾದರೂ ಪಾಕ್ ಪುಂಡಾಟಕ್ಕೆ ಬ್ರೇಕ್ ಇಲ್ಲಾದಂತಾಗಿದೆ. ಪದೇ ಪದೇ ಗಡಿಯೊಳಗೆ ನುಸುಳಲು ಯತ್ನಿಸುತ್ತಿರುವ ಪಾಕ್ ಕಳೆದ 24 ಘಂಟೆಯಲ್ಲಿ 3 ಭಾರಿ ಕದನ ವಿರಾಮ ಉಲ್ಲಂಘಿಸಿದೆ.
ಇಲ್ಲಿನ ಬಾರಮುಲ್ಲಾ, ಗುರ್ ದಾಸ್ ಪುರ್ ಮತ್ತು ಪೂಂಚ್ ಗಡಿ ಭಾಗದ ಶಹಾಪುರ ಭಾಗದಲ್ಲಿ ಬಾರಿ ಪ್ರಮಾಣದ ಗುಂಡಿನ ಕಾಳಗ ನೆಡೆದಿದ್ದು ಬಾರಮುಲ್ಲಾ ಗಡಿಯಂಚಿನಲ್ಲಿ ಒರ್ವ ಯೋಧ ಹುತಾತ್ಮನಾದರೆ ಭಾರತೀಯಾ ಸೇನಾ ಯೋಧರಿಂದ ತಕ್ಕ ಪ್ರತ್ಯುತ್ತರ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಸೇನಾ ಪೋಲಿಸ್ ಅಧೀಕ್ಷಕರಾದ ಇಂತ್ಯಾಜ್ 4 ಜನ ಉಗ್ರರಿದ್ದ ತಂಡವು ಗುಂಡಿನ ದಾಳಿ ನೆಡೆಸಿತು ಎಂದು ತಿಳಿಸಿದ್ದಾರೆ.