
ಶ್ರೀರಂಗಾನಗರ (ರಾಜಸ್ಥಾನ), (ಮಾ.09): ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಭದ್ರತಾ ಪಡೆ ಅಟ್ಟಾಡಿಸಿ ಗುಂಡಿನ ದಾಳಿ ನಡೆಸಿದೆ.
ಭಾರತೀಯ ಸೇನೆ ನಡೆಸಿದ ಗುಂಡಿನ ಸುರಿಮಳೆಗೆ ಪಾಕ್ ಡ್ರೋನ್ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆಗಿದೆ. ಇಂದು (ಶನಿವಾರ) ಬೆಳಗ್ಗೆ ರಾಜಸ್ಥಾನದ ಶ್ರೀರಂಗಾನಗರದ ಬಳಿ ಪಾಕಿಸ್ತಾನದ ಡ್ರೋಣ್ ಹಾರಾಡುತ್ತಿತ್ತು.
ಗಡಿಯೊಳಗೆ ಕದ್ದು ಹಾರಾಟ ಮಾಡ್ತಿದ್ದ ಪಾಕ್ ಡ್ರೋಣ್ ಢಮಾರ್!
ಇದನ್ನ ಗಮನಿಸಿದ ಬಿಎಸ್ಎಫ್ ಯೋಧರು, ತಕ್ಷಣ ಕಾರ್ಯಪ್ರವೃತ್ತರಾಗಿ ಡ್ರೋಣ್ ಮೇಲೆ ಗುಂಡಿನ ಸುರಿಮಳೆಗೈದರು. ಬಳಿಕ ಡ್ರೋಣ್ ಬಂದ ದಾರಿಗೆ ವಾಪಸ್ ಹಾರಿಹೋಗಿದೆ.
ಏರ್ ಸ್ಟ್ರೈಕ್ ದಾಳಿ ಬಳಿಕ ಈಗಾಗಲೇ ಪಾಕ್ನ ಎರಡು ಡ್ರೋಣ್ಗಳು ಪದೇ-ಪದೇ ಭಾರತೀಯ ಗಡಿಯೊಳಗೆ ನುಗ್ಗಿ ಪೆಟ್ಟು ತಿಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.