
ಶ್ರೀನಗರ(ಸೆ.02): ಗಡಿದಾಟಿ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ 38 ಭಯೋತ್ಪಾದಕರನ್ನು ಬಗ್ಗು ಬಡಿದ ಭಾರತೀಯ ಸೇನೆಯ ದಿಟ್ಟ ಸರ್ಜಿಕಲ್ ದಾಳಿ ಕಾರ್ಯಾಚರಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಆದರೆ ಇದು ಪಾಕ್ ಗೆ ತಡೆದುಕೊಳ್ಳಲಾಗುತ್ತಿಲ್ಲ, ಇದರಿಂದಾಗಿ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಂತೆ ಕಾಣುತ್ತೆ. ಭಾರತದ ಗಡಿ ಭಾಗವಾಗದ ಪಠಾಣ್ ಕೋಟ್, ಫರೀದ್ಕೋಟೆ, ಸೇರಿದಂತೆ ಹಲವು ಕಡೆ ಹಳದಿ ಮತ್ತು ಹಸಿರು ಬಣ್ಣದ ಬಲೂನ್ ಪತ್ತೆಯಾಗಿವೆ.
ಬಲೂನ್ ಮೇಲೆ ಭಾರತ ನಡೆಸಿರೋ ಸರ್ಜಿಕಲ್ ದಾಳಿಗೆ ಪಾಕ್ ಪ್ರತಿಕಾರದ ದಾಳಿ ಮಾಡೇ ಮಾಡಿತ್ತೆ ಎಂದು ಉರ್ದುವಿನಲ್ಲಿ ಬರೆದಿರೋ ಬಲೂನ್ಗಳ ಸಿಕ್ಕಿವೆ.
ಈ ಬಲೂನ್ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಲೂನ್ಗಳನ್ನು ವಶಕ್ಕೆ ಪಡೆದ ದಿನ್ನಗರದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.