ಅರ್ಜುನ ಹೊತ್ತು ಸಾಗುತ್ತಿದ್ದ ಮರದ ಅಂಬಾರಿಗೆ ವಿದ್ಯುತ್ ತಂತಿ ಸ್ಪರ್ಶ.. ಸ್ವಲ್ಪದರಲ್ಲೇ ತಪ್ಪಿತು ಅವಘಡ

By internet deskFirst Published Oct 2, 2016, 6:17 AM IST
Highlights

ಗಜಗಾಂಭಿರ್ಯದಿಂದ ರಸ್ತೆಯಲ್ಲಿ ಸಾಗುತ್ತಿದ್ದ ಅರ್ಜುನನ ಮರದ ಅಂಬಾರಿಗೆ ವಿದ್ಯುತ್ ತಂತಿ ತಗುಲಿತು.

ಮೈಸೂರು(ಅ.02): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳೆಕಟ್ಟಿದೆ. ಜಂಬೂಸವಾರಿ ಮೆರವಣಿಗೆಗೆ ಇನ್ನೇನು 9 ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ, ಅಂಬಾರಿ ಹೊತ್ತು ಸಾಗಲಿರುವ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.

ಸಂಪ್ರದಾಯಬದ್ದವಾಗಿ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಗಿದೆ. ಅಂಭಾರಿ ಹೊರಲಿರುವ ಅರ್ಜುನನಿಗೆ ಇತರೆ ಆನೆಗಳು ಸಾಥ್​ ನೀಡಿದ್ದವು. ಮರದ ಅಂಬಾರಿ ಹೊತ್ತ ಅರ್ಜುನ ೧ ಗಂಟೆ ೧೦ ನಿಮಿಷದ ಅವಧಿಯಲ್ಲಿ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಸಾಗಿದ್ದಾನೆ.

Latest Videos

ಮರದ ಅಂಬಾರಿ ಹೊತ್ತು ಅರಮನೆಯಿಂದ ಹೊರಟ ಅರ್ಜುನನಿಗೆ ಶಾಕ್ ಕಾದಿತ್ತು. ಗಜಗಾಂಭಿರ್ಯದಿಂದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿತು. ಆರ್​ಎಂಪಿ ವೃತ್ತದ ಬಳಿ ಮರದ ಅಂಬಾರಿಗೆ ವಿದ್ಯುತ್ ತಂತಿ ತಡೆ ಹೊಡೆಯಿತು. ಇದ್ರಿಂದ ಬೆದರಿದ ಅರ್ಜುನ ದಿಢೀರನೇ ಹಿಂದೆ ಸರದ. ಹೀಗಾಗಿ, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯ್ತು. ರಸ್ತೆ ಮಧ್ಯೆ ಹಾದು ಹೋಗಿರುವ ವಿದ್ಯುತ್ ಹೈ ಟೆನ್ಷನ್ ಕೇಬಲ್​ ಅನ್ನು ಗಮನಿಸದೇ ಮಾವುತ ಅರ್ಜುನನ್ನ ಮುನ್ನಡೆಸಿದ್ದೇ ಈ ಅವಾಂತರಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಎಚ್ಚೆತ್ತ ಅರಣ್ಯಾಧಿಕಾರಿ ಅರ್ಜುನ ನನ್ನು ರಸ್ತೆ ಬದಿಗೆ ಕರೆತರುವಂತೆ ಮಾವುತರಿಗೆ ಸೂಚನೆ ನೀಡಿದರು.

click me!