
ಬೆಂಗಳೂರು(ಅ. 12): ಉದ್ಯಾನನಗರಿಯ ಮೆಟ್ರೋ ನಿಲ್ದಾಣಗಳು ಇನ್ಮುಂದೆ ಬಣ್ಣ ಬಣ್ಣದ ಚಿತ್ತಾರಗಳಿಂದ ಪ್ರಯಾಣಿಕರನ್ನ ಮತ್ತಷ್ಟು ಆಕರ್ಷಸಲಿವೆ. ಮೆಜೆಸ್ಟಿಕ್ ಸೇರಿದಂತೆ ನಗರದ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸ್ಟ್ರೀಟ್ ಆರ್ಟ್ ಹಾಗೂ ಸೃಷ್ಟಿ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು ಸುಂದರ ಚಿತ್ರಗಳನ್ನ ರಚಿಸುತ್ತಿದ್ದಾರೆ. ಬೆಂಗಳೂರಿನ ಆಕರ್ಷಕ ಸ್ಥಳಗಳು, ಫ್ಯೂಚರ್ ಬೆಂಗಳೂರಿನ ಅದ್ಭುತ ಚಿತ್ರಗಳೂ ಸೇರಿದಂತೆ, ನಾಡ ಪ್ರಭು ಕೇಂಪೆಗೌಡ, ರಾಕ್ಷಸರ ಚಿತ್ರಗಳು ಮೆಟ್ರೋ ನಿಲ್ದಾಣಗಳ ಕಳೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂದಿನಿಂದ ಪ್ರಾರಂಭವಾಗಿರುವ ಚಿತ್ರಬಿಡಿಸುವ ಕೆಲಸ ಮುಂದಿನ ನಾಲ್ಕೈದು ದಿನಗಳಲ್ಲಿ ಪೂರ್ಣಗೊಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.