
ಬೆಂಗಳೂರು (ಮೇ.6): ಪಾಕಿಸ್ತಾನ ವಿರುದ್ಧ ಯುದ್ಧದ ಕಾರ್ಮೋಡ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಮೇ.7 ರಿಂದ ಆರಂಭವಾಗಿ ಮೂರು ದಿನಗಳ ಕಾಲ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ಸ್ ನಡೆಸುವಂತೆ ರಾಜ್ಯಗಳಿಗೆ ಕೇಳಿಕೊಂಡಿದೆ. ಇದರ ಬೆನ್ನಲ್ಲಿಯೇ ಮೇ.7ರ ಬುಧವಾರದಂದು ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಅಭ್ಯಾಸ ನಡೆಯಲಿದೆ.
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ. 7 ರಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತದೆ ಎನ್ನುವ ಮಾಹಿತಿಯನ್ನೂ ನೀಡಿದೆ. ಕರ್ನಾಟಕದ ಎರಡು ಜಿಲ್ಲೆ ಹಾಗೂ ಕೈಗಾ ಅಣುಸ್ಥಾವರ ಇರುವ ಕಾರವಾರ ತಾಲೂಕಿನಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆ, ಸೀಬರ್ಡ್ ನೌಕಾನೆಲೆ ಇರುವ ಉತ್ತರ ಕನ್ನಡದ ಕಾರವಾರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ನಾಳೆ ಅಣಕು ಕವಾಯತುಗಳು ನಡೆಯಲಿದೆ. ಆ ಮೂಲಕ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.
ಮಾಕ್ ಡ್ರಿಲ್ಗೆ ಆಪರೇಷನ್ ಅಭ್ಯಾಸ ಎಂದು ಹೆಸರು ಇಡಲಾಗಿದ್ದು, ಒಂದು ವಾರಗಳ ಕಾಲ ಮಾಕ್ ಡ್ರಿಲ್ ನಡೆಯಲಿದೆ. ಎಲ್ಲಾ ಸೈರನ್ ಗಳು ಪೊಲೀಸ್ ಠಾಣೆ, ಅಗ್ನಿಶಾಮಕದಳ ಕಚೇರಿಗಳ ಮೇಲೆ ಅಳವಡಿಕೆಯಾಗಿರುತ್ತದೆ. 35 ಕಡೆ ಸೈರನ್ ಅಳವಡಿಕೆಯಾಗಿದೆ. ಮೂರು ಕಿ.ಮೀ ವ್ಯಾಪ್ತಿಯ ತನಕ ಮೊಳಗಲಿದೆ ಎಂದು ತಿಳಿಸಲಾಗಿದೆ. 35 ಕಡೆ ಸೈರನ್ ಅಳವಡಿಕೆಯಾಗಿದ್ದು, 32 ಕಡೆ ಸೈರನ್ ಆಗಲಿದೆ. ಮೂರು ಕಡೆ ಸೈರನ್ ವರ್ಕ್ ಆಗಲ್ಲ ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಪ್ರಮುಖವಾಗಿ ಮಲ್ಲೇಶ್ವರದಲ್ಲಿ ಯುದ್ದ ಮಾಕ್ ಡ್ರಿಲ್ ಯೋಜಿಸಲಾಗಿದೆ. ಮಾಕ್ ಡ್ರಿಲ್ ನಲ್ಲಿ NCC, NSS, civil ಸಿವಿಲ್ ಡಿಫೈನ್ಸ್, ಡಾಕ್ಟರ್ ಗಳು, ಭಾಗಿಯಾಗುತ್ತಾರೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ನಂತಹ ಗಡಿ ರಾಜ್ಯಗಳು ಸೇರಿದಂತೆ ಭಾರತದ 244 ಜಿಲ್ಲೆಗಳಲ್ಲಿ ಮೇ 7 ರಂದು ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು ನಿಗದಿಪಡಿಸಲಾಗಿದೆ. ವಾಯುದಾಳಿ ಸೈರನ್ಗಳು, ಬ್ಲ್ಯಾಕೌಟ್ಗಳು ಮತ್ತು ಸ್ಥಳಾಂತರಿಸುವ ಪೂರ್ವಾಭ್ಯಾಸಗಳನ್ನು ಯೋಜಿಸಲಾಗಿದೆ.
ಗೃಹ ಸಚಿವಾಲಯ ಹೊರಡಿಸಿದ ಪತ್ರದ ಪ್ರಕಾರ, ಭದ್ರತಾ ಬೆದರಿಕೆಗಳಿಗೆ ಗುರಿಯಾಗಬಹುದಾದ ಪ್ರದೇಶಗಳು ಸೇರಿದಂತೆ ಭಾರತದಾದ್ಯಂತ 244 ಜಿಲ್ಲೆಗಳಲ್ಲಿ ಅಣಕು ಕವಾಯತುಗಳು ನಡೆಯಲಿವೆ. ಈ ಕವಾಯತು ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳ ಸಮನ್ವಯದೊಂದಿಗೆ ನಡೆಯಲಿದ್ದು, ನಾಗರಿಕ ರಕ್ಷಣಾ ವಾರ್ಡನ್ಗಳು, ಗೃಹರಕ್ಷಕ ದಳದ ಸಿಬ್ಬಂದಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಸದಸ್ಯರು, ವಿದ್ಯಾರ್ಥಿಗಳು ಮತ್ತು ನೆಹರು ಯುವ ಕೇಂದ್ರ ಸಂಘಟನ್ (ಎನ್ವೈಕೆಎಸ್) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ನಂತಹ ಸಂಸ್ಥೆಗಳ ಸ್ವಯಂಸೇವಕರು ಭಾಗವಹಿಸಲಿದ್ದಾರೆ.
ವೈಮಾನಿಕ ಕಣ್ಗಾವಲಿನಿಂದ ಮರೆಮಾಚುವಿಕೆಯನ್ನು ಅನುಕರಿಸಲು ವಿದ್ಯುತ್ ಸ್ಥಾವರಗಳು, ಸಂವಹನ ಕೇಂದ್ರಗಳು ಮತ್ತು ಮಿಲಿಟರಿ ಸ್ಥಾಪನೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಮರೆಮಾಚುವ ಅಭ್ಯಾಸಗಳಿಗೆ ಒಳಪಡಿಸಲಾಗುತ್ತದೆ.
ಈಗ ಏಕೆ?: ಈ ವ್ಯಾಯಾಮದ ಸಮಯವು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವುದಕ್ಕೆ ನಿಕಟ ಸಂಬಂಧ ಹೊಂದಿದೆ, ವಿಶೇಷವಾಗಿ ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ನಿರಂತರವಾಗಿ ನಿಯಂತ್ರಣ ರೇಖೆ (ಎಲ್ಒಸಿ) ಕದನ ವಿರಾಮವನ್ನು ಉಲ್ಲಂಘಿಸುತ್ತಿರುವುದರಿಂದ ರಾಷ್ಟ್ರೀಯ ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಈ ವ್ಯಾಯಾಮವನ್ನು ಮಾಡಲಾಗುತ್ತಿದೆ.
ಭಾರತ-ಪಾಕಿಸ್ತಾನ 1971 ಯುದ್ಧ: ಈ ನಾಗರಿಕ ರಕ್ಷಣಾ ಕವಾಯತು ಐತಿಹಾಸಿಕ ಮಹತ್ವವನ್ನು ಹೊಂದಿದೆ. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಮುನ್ನಾದಿನದಂದು ಇಂತಹ ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಕವಾಯತು ಕೊನೆಯ ಬಾರಿಗೆ ನಡೆದಿತ್ತು. ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾದಂತೆ, ಭಾರತವು ವಾಯುದಾಳಿ ಸೈರನ್ಗಳು, ಬ್ಲ್ಯಾಕೌಟ್ಗಳು ಮತ್ತು ಸಾರ್ವಜನಿಕ ಎಚ್ಚರಿಕೆ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ರೀತಿಯ ಕವಾಯತುಗಳನ್ನು ನಡೆಸಿತು. ಈ ಕವಾಯತುಗಳ ಸಮಯದಲ್ಲಿ, ನಾಗರಿಕರಿಗೆ ಆಶ್ರಯ ಪಡೆಯಲು ಮತ್ತು ವೈಮಾನಿಕ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತರಬೇತಿ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.