
ನವದೆಹಲಿ (ಫ.07): ಗಂಗಾ ನದಿ ಶುದ್ಧಿಗೆಂದು ರಚಿಸಲಾಗಿರುವ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಶನ್ (ಎನ್ಎಂಸಿಜಿ)ಯನ್ನು ಹಸಿರು ನ್ಯಾಯಾಧಿಕರಣವು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಗಂಗಾ ಶುದ್ಧೀಕರಣದ ಹೆಸರಿನಲ್ಲಿ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಶನ್'ನಿಂದ ಹಣ ಹಾಗೂ ಸಂಪನ್ಮೂಲಗಳನ್ನು ಪೋಲಾಗುತ್ತಿದೆಯೆಂದು ನ್ಯಾಯಾಧಿರಣವು ಛೀಮಾರಿ ಹಾಕಿದೆ.
ಸರ್ಕಾರದ ಅಂಗಸಂಸ್ಥೆಗಳ ನಡುವೆಯೇ ಸಂವಹನದ ಕೊರೆತೆಯಿದೆ. ಮಾಲಿನ್ಯ ಹೆಚ್ಚಿಸುವ ಉದ್ಯಮಗಳಿಗೆ ಕಡಿವಾಣ ಹಾಕುವ ಯೋಜನೆಯನ್ನೇಕೆ ರೂಪಿಸಿಲ್ಲ? ಎಂದು ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಪ್ರಶ್ನಿಸಿದೆ.
ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಯೂ ಯಾವುದೇ ಫಲಿತಾಂಶವಿಲ್ಲ. ಸಂಸ್ಥೆಯು ಹಣ ಪೋಲು ಮಾಡುತ್ತಿದೆಯೆಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಗಂಗಾವನ್ನು ಶುದ್ಧೀಕರಿಸುವ ನಮಮಿ ಗಂಗಾ ಯೋಜನೆಗೆ ಕೇಂದ್ರ ಸರ್ಕಾರವು ಸುಮಾರು 2000 ಕೋಟಿ ರೂ. ಅನುದಾನ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.