
ಉಡುಪಿ(ಡಿ.2): ಕರಾವಳಿಯಲ್ಲಿ ಮತ್ತೆ ಕಂಬಳದ ಗತವೈಭವ ಮರುಕಳಿಸಿದೆ. ಕಳೆದ ವರ್ಷ ನಿಂತಿದ್ದ ಕಂಬಳ ಈ ವರ್ಷ ಮತ್ತೆ ತನ್ನ ಪರ್ವವನ್ನಾರಂಭ ಮಾಡಿದೆ. ಕರಾವಳಿಗರು ಈಗ ಖುಷಿ ಖುಷಿಯಾಗಿ ಕೋಣಗಳ ರೇಸ್ ಆರಂಭಿಸಿದ್ದಾರೆ. ಉಡುಪಿಯ ಪರೀಕದಲ್ಲಿ ಕಳೆದ ಎರಡು ಶತಮಾನಗಳಿಂದ ಕಂಬಳ ನಡೆಸಿಕೊಂಡು ಬರಲಾಗುತ್ತಿದ್ದು, ನ್ಯಾಯಾಲಯ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಕೋಣದ ಓಟ ಮತ್ತೆ ಶುರುವಾಗಿದೆ.
ಕಂಬಳಕ್ಕೂ ಮುನ್ನ ಗುತ್ತಿನ ಮನೆಯ ಅರಸರ ಮುಂದೆ ದೈವ ಹೆಜ್ಜೆಹಾಕುತ್ತದೆ. ಕೋಣ ಮತ್ತು ದೈವದ ಪಾತ್ರದಾರಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಾರೆ. ಈ ಮಹೋತ್ಸವಕ್ಕಾಗಿ ರೈತರು ವರ್ಷವಿಡೀ ಕಾತರದಿಂದ ಕಾಯುತ್ತಾರೆ. ಗುತ್ತಿನ ಮನೆಯ ಮುಂದೆ ಕೋಣಗಳನ್ನು ಬಗೆ ಬಗೆಯಾಗಿ ಅಲಂಕರಿಸಿ, ರಾಜಠೀವಿಯಲ್ಲಿ ಕೆಸರು ಗದ್ದೆಗೆ ಇಳಿಯುವುದೇ ಒಂದು ಅಪೂರ್ವ ಸನ್ನಿವೇಶವಾಗಿರುತ್ತದೆ. ಕೋಣಗಳ ಮೆರವಣಿಗೆ ನಡೆದ ನಂತರ ಕೋಣಗಳ ರೇಸ್ ಆರಂಭ ಮಾಡಲಾಗುತ್ತದೆ. ಇದೀಗ ಹಲವು ಅಡೆತಡೆಗಳನ್ನ ಮೀರಿ ಕಂಬಳ ಕ್ರೀಡೆ ಮತ್ತೆ ಆರಂಭವಾಗಿರುವುದು ಕರಾವಳಿಗರಲ್ಲಿ ಸಂತಸ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.