ಕೆರೆ ಹೂಳೆತ್ತುವ ಕಾಮಗಾರಿಗೆ ಡಿಸಿಗೆ ಅಧಿಕಾರಿಗಳ ಸಾಥ್

Published : May 04, 2017, 04:49 PM ISTUpdated : Apr 11, 2018, 12:40 PM IST
ಕೆರೆ ಹೂಳೆತ್ತುವ ಕಾಮಗಾರಿಗೆ ಡಿಸಿಗೆ ಅಧಿಕಾರಿಗಳ ಸಾಥ್

ಸಾರಾಂಶ

ಬರ ಮತ್ತು ನೀರಿನಿಂದ ತತ್ತರಿಸಿರುವ ನಾಡಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸಾಥ್ ನೀಡಿರುವ ಘಟನೆ ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ನಡೆದಿದೆ. 

ಹಾವೇರಿ (ಮೇ.04): ಬರ ಮತ್ತು ನೀರಿನಿಂದ ತತ್ತರಿಸಿರುವ ನಾಡಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸಾಥ್ ನೀಡಿರುವ ಘಟನೆ ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ನಡೆದಿದೆ. 

ಇಲ್ಲಿ ಅಧಿಕಾರಿಗಳ ತಂಡ ನಡೆಸಿದ ಶ್ರಮದಾನದಲ್ಲಿ ಜಿಲ್ಲಾಧಿಕಾರಿ ಗುದ್ದಲಿ ಹಿಡಿದು ಮಣ್ಣು ಅಗೆದರು. ಬುಟ್ಟಿಯಲ್ಲಿ ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ್ದಲ್ಲದೆ ಟ್ರ್ಯಾಕ್ಟರ್ ಚಲಾಯಿಸಿದರು. ಅವರೊಂದಿಗೆ ಜಿಪಂ ಸಿಇಒ, ಡಿಡಿಪಿಐ, ಡಿಎಚ್‌ಒ ಸೇರಿದಂತೆ ಜಿಲ್ಲೆಯ ೪೦ರಿಂದ ೫೦ ಹಿರಿಯ ಅಧಿಕಾರಿಗಳು ಕೈ ಜೋಡಿಸಿದರು. ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ಈ ಕಂಡುಬಂದ ಈ ಅಪರೂಪದ ದೃಶ್ಯಕ್ಕೆ  ಕಾರ್ಮಿಕರೂ ಸೇರಿದಂತೆ ಸ್ಥಳೀಯ ನಾಗರಿಕರು ಅಚ್ಚರಿ ಪಟ್ಟರು. 

ಸುಮಾರು ಒಂದು ಗಂಟೆ ಶ್ರಮದಾನದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಕೂಲಿಕಾರರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಿದರು. ಜಿಪಂ ಸಿಇಒ ಕೆ.ಬಿ. ಅಂಜನಪ್ಪ, ಡಿಡಿಪಿಐ ಶಿವನಗೌಡ ಪಾಟೀಲ್, ಡಿಎಚ್‌ಒ ಡಾ. ಮಹೇಶ ಬಡ್ಡಿ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ