ಇಂಗ್ಲೆಂಡಿನಲ್ಲಿರುವ ದಾವೂದ್ ಆಸ್ತಿ ಮುಟ್ಟುಗೋಲು

Published : May 04, 2017, 03:34 PM ISTUpdated : Apr 11, 2018, 12:47 PM IST
ಇಂಗ್ಲೆಂಡಿನಲ್ಲಿರುವ ದಾವೂದ್ ಆಸ್ತಿ ಮುಟ್ಟುಗೋಲು

ಸಾರಾಂಶ

ಈ ಮೊದಲು ಯುಎಇ'ನಲ್ಲಿರುವ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿತ್ತು. ಆಜ್'ತಕ್ ಪತ್ರಿಕೆ ವರದಿ ಮಾಡಿರುವಂತೆ ನರೇಂದ್ರ ಮೋದಿ ಸರ್ಕಾರದ ಮನವಿ ಮೇರೆಗೆ ಭೂಗತಪಾತಕಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೇಂದ್ರೀಯ ಗೃಹ ಇಲಾಖೆ ನೀಡಿರುವ ಹೇಳಿಕೆಯಂತೆ ಭಾರತದ ಗುಪ್ತಚರ ಸಂಸ್ಥೆಗಳು ಕೆಲವು ದಿನಗಳಿಂದ ಇಂಗ್ಲೆಂಡ್ ಸರ್ಕಾರದಿಂದ ಮಾಹಿತಿ ಹಂಚಿಕೊಳ್ಳುತ್ತಿದೆ.

ನವದೆಹಲಿ(ಮೇ.04): ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ'ನ ಇಂಗ್ಲೆಂಡಿನ ಆಸ್ತಿಯನ್ನು ಅಲ್ಲಿನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಈ ಮೊದಲು ಯುಎಇ'ನಲ್ಲಿರುವ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿತ್ತು. ಆಜ್'ತಕ್ ಪತ್ರಿಕೆ ವರದಿ ಮಾಡಿರುವಂತೆ ನರೇಂದ್ರ ಮೋದಿ ಸರ್ಕಾರದ ಮನವಿ ಮೇರೆಗೆ ಭೂಗತಪಾತಕಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೇಂದ್ರೀಯ ಗೃಹ ಇಲಾಖೆ ನೀಡಿರುವ ಹೇಳಿಕೆಯಂತೆ ಭಾರತದ ಗುಪ್ತಚರ ಸಂಸ್ಥೆಗಳು ಕೆಲವು ದಿನಗಳಿಂದ ಇಂಗ್ಲೆಂಡ್ ಸರ್ಕಾರದಿಂದ ಮಾಹಿತಿ ಹಂಚಿಕೊಳ್ಳುತ್ತಿದೆ.

ಕಳೆದ ಜನವರಿಯಲ್ಲಿ ಯುಎಇ ಸರ್ಕಾರ ದಾವುದ್ ಇಬ್ರಾಹಿಂ'ನ ಹೋಟೆಲ್,ಆಸ್ತಿ, ಕಂಪನಿಗಳು ಸೇರಿದಂತೆ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಭಾರತದ ಭದ್ರತಾ ಸಲಹೆಗಾರ ಅಜಿತ್ ದಾವೊಲ್ ಕಳೆದ ವರ್ಷ ಯುಎಇ'ಗೆ ಭೇಟಿ ನೀಡಿದ ನಂತರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ದಾವುದ್'ನ ಆಸ್ತಿ ಮೊರಾಕೊ,ಸ್ಪೇನ್,ಯುಎಇ,ಸಿಂಗಾಪುರ್,ಥೈಲಾಂಡ್,ಸೈಪ್ರಸ್,ಟರ್ಕಿ,ಇಂಡಿಯಾ,ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿದೆ.

ಈ ನಡುವೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಶಿ ಬ್ರಿಟನ್ ಸರ್ಕಾರದ ಶಾಶ್ವತ ಇಲಾಖಾ ಕಾರ್ಯದರ್ಶಿ ಪಸ್ಟಿ ವಿಲ್ಕಿನ್'ಸನ್ ಅವರೊಂದಿಗೆ  ಮಾತುಕತೆ ನಡೆಸಿದ್ದರು. ಭಾರತೀಯ ಬ್ಯಾಂಕ್'ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ದೇಶದ್ರೋಹ ಆರೋಪ ಹೊತ್ತು ಇಂಗ್ಲೆಂಡ್'ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಹಸ್ತಾಂತರದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ಕೋಟಿ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ
ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!