
ಭುವನೇಶ್ವರ[ಮೇ.13]: ಫೋನಿ ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಒಡಿಶಾದಲ್ಲಿ ಮತ್ತೆ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಸರ್ಕಾರ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಫೋನಿ ಚಂಡಮಾರುತ ಒಟ್ಟು 64 ಮಂದಿಯನ್ನು ಬಲಿಪಡೆದಂತಾಗಿದೆ.
ಮೇ 3ರಂದು ಪ್ರತೀ ಗಂಟೆಗೆ 240 ಕಿ.ಮೀ ವೇಗವಾಗಿ ಅಪ್ಪಳಿಸಿದ ಫೋನಿ ಚಂಡಮಾರುತ ಪರಿಣಾಮ ಒಡಿಶಾದ ಪುರಿಯಲ್ಲಿ ಭಾರೀ ಪ್ರಮಾಣ ಮಳೆಯಾಗಿತ್ತು. ಅಲ್ಲದೆ, ಈ ಘಟನೆಯಲ್ಲಿ 241ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪೈಕಿ ಇದೀಗ ಮೃತರಾದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.
ಇದುವರೆಗೂ ಪುರಿ ಜಿಲ್ಲೆಯಲ್ಲಿ 39 ಮಂದಿ, ಖುರ್ದಾ ಜಿಲ್ಲೆಯಲ್ಲಿ 9, ಕಠಕ್ ಜಿಲ್ಲೆಯಲ್ಲಿ 6, ಮಯೂರಭಂಜ್ನಲ್ಲಿ 4 ಹಾಗೂ ಕೇಂದ್ರಪಾರ ಹಾಗೂ ಜೈಪುರ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ಪರಿಸ್ಥಿತಿ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.