
ಬೆರ್ಹಾಂಪುರ[ಅ.26]: ದೆವ್ವಗಳ ಬಗ್ಗೆ ಜನರಲ್ಲಿನ ಮೂಢನಂಬಿಕೆ, ವಾಮಾಚಾರ ತೊಡೆದುಹಾಕಲು ಓಡಿಶಾದ ಗಂಜಾಮ್ ಜಿಲ್ಲಾಡಳಿತ ಜನರಿಗೆ ವಿಶೇಷ ಸವಾಲೊಂದನ್ನು ನೀಡಿದೆ. ಭೂತ, ದೆವ್ವಗಳ ಅಸ್ತಿತ್ವವನ್ನು ಯಾರು ಸಾಬೀತುಪಡಿಸುತ್ತಾರೋ ಅವರಿಗೆ 50 ಸಾವಿರ ರು. ಬಹುಮಾನ ನೀಡಲಾಗುತ್ತದೆ ಎಂದು ಘೋಷಿಸಿದೆ.
ಅನಾರೋಗ್ಯ ಕಾಣಿಸಿಕೊಂಡಾಗ ಮಂತ್ರವಾದಿ ಬಳಿಗೆ ಹೋಗುವ ಬದಲು ಆಸ್ಪತ್ರೆಗೆ ದಾಖಲಾಗಬೇಕು. ದೆವ್ವ, ಮಾಟ ಮಂತ್ರ ಎಲ್ಲವೂ ಮೂಢನಂಬಿಕೆ. ವಾಮಾಚಾರದಿಂದ ಇತರರಿಗೆ ಕೆಡಕು ಆಗುತ್ತದೆ ಎಂಬುದು ಶುದ್ಧಸುಳ್ಳು ಎಂದು ಜಿಲ್ಲಾಧಿಕಾರಿ ವಿಜಯ್ ಅಮೃತಾ ಕುಲಂಗೆ ಹೇಳಿದ್ದಾರೆ.
ಈಚೆಗೆ ವಾಮಾಚಾರ ನೆಪದಲ್ಲಿ 6 ಜನರ ಹಲ್ಲುಕೀಳಿಸಿ, ಮಲಮೂತ್ರ ಕುಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 45 ಜನರನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.