ರಫೇಲ್‌ ಪೂಜೆ ತಪ್ಪಾದ್ರೆ ಆ್ಯಂಟನಿ ಪತ್ನಿ ಮಾಡಿದ್ದೇನು?: ಸಚಿವೆ ನಿರ್ಮಲಾ

Published : Oct 12, 2019, 10:04 AM IST
ರಫೇಲ್‌ ಪೂಜೆ ತಪ್ಪಾದ್ರೆ ಆ್ಯಂಟನಿ ಪತ್ನಿ ಮಾಡಿದ್ದೇನು?: ಸಚಿವೆ ನಿರ್ಮಲಾ

ಸಾರಾಂಶ

ರಫೇಲ್‌ಗೆ ರಾಜ್‌ನಾಥ್‌ ಪೂಜೆ ತಪ್ಪಾದರೆ ಎ.ಕೆ.ಆ್ಯಂಟನಿ ಪತ್ನಿ ಮಾಡಿದ್ದೇನು?: ಸಚಿವೆ ನಿರ್ಮಲಾ| ಯುದ್ಧ ವಿಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ರಫೇಲ್‌ಗೆ ನಿಂಬೆಹಣ್ಣು ಮತ್ತು ತೆಂಗಿನ ಕಾಯಿಯಿಂದ ಪೂಜೆ ಮಾಡಿದ್ದ ರಾಜನಾಥ್ ಸಿಂಗ್

ಪುಣೆ[ಅ.12]: ಫ್ರಾನ್ಸ್‌ನಲ್ಲಿ ವಿಜಯದಶಮಿ ಹಾಗೂ ಭಾರತೀಯ ವಾಯುಪಡೆ ಸಂಸ್ಥಾಪನಾ ದಿನದಂದು ನಡೆದ ರಫೇಲ್‌ ಯುದ್ಧ ವಿಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ರಫೇಲ್‌ಗೆ ನಿಂಬೆ ಹಣ್ಣು ಮತ್ತು ತೆಂಗಿನ ಕಾಯಿಯಿಂದ ಪೂಜೆ ಮಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕ್ರಮವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ರಫೇಲ್‌ ಯುದ್ಧ ವಿಮಾನಕ್ಕೆ ಪೂಜೆ ಮಾಡಿರುವುದು ಮೂಢನಂಬಿಕೆಯ ಸಂಕೇತವಲ್ಲ. ಆದರೆ, ಇದು ಭಾರತೀಯ ಸಂಸ್ಕೃತಿ ಎಂದು ನಿರ್ಮಲಾ ಪ್ರತಿಪಾದಿಸಿದ್ದಾರೆ.

ಈ ಹಿಂದಿನ ರಕ್ಷಣಾ ಸಚಿವ ಹಾಗೂ ಅವರ ಪತ್ನಿ ನೌಕಾಪಡೆಯ ಹಡಗುಗಳ ಉದ್ಘಾಟನೆ ವೇಳೆಯೂ ಅವರು ತಮ್ಮ ಸಂಪ್ರದಾಯ ಪಾಲನೆ ಮಾಡಿದ್ದರು. ಆಗ ಇಲ್ಲದ ಮೂಢ ನಂಬಿಕೆಯ ಚಿಂತೆ ಈಗ ಏಕೆ ಎಂದು ಪ್ರಶ್ನಿಸಿದರು. ಈ ಮೂಲಕ ಮಾಜಿ ರಕ್ಷಣಾ ಸಚಿವ ಎ.ಕೆ ಆ್ಯಂಟನಿ ಹಾಗೂ ಅವರ ಪತ್ನಿ ಪೂಜೆ ಮಾಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ