ಕಾಶ್ಮೀರ ಕ್ಯಾತೆ ತೆಗೆದ ಪಾಕ್‌ಗೆ ಮುಖಭಂಗ!

Published : Aug 10, 2019, 08:05 AM ISTUpdated : Aug 10, 2019, 08:07 AM IST
ಕಾಶ್ಮೀರ ಕ್ಯಾತೆ ತೆಗೆದ ಪಾಕ್‌ಗೆ ಮುಖಭಂಗ!

ಸಾರಾಂಶ

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದ ಪಾಕಿಸ್ತಾನಕ್ಕೆ ಇದೀಗ ತೀವ್ರ ಮುಖಭಂಗವಾಗಿದೆ. 

ಬೀಜಿಂಗ್‌/ವಾಷಿಂಗ್ಟನ್‌ [ಆ.10]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಕೆಂಡಕಾರುತ್ತಿರುವ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲು ಅದರ ‘ಪರಮಾಪ್ತ ಮಿತ್ರ ದೇಶ’ ಚೀನಾ, ಅಮೆರಿಕ ಹಾಗೂ ವಿಶ್ವಸಂಸ್ಥೆಗಳು ನಿರಾಕರಿಸಿವೆ.

ನೀವೇ ಮಾತಾಡಿಕೊಳ್ಳಿ: 370 ವಿಚಾರದಲ್ಲಿ ನೆರವು ಕೇಳಲು ತನ್ನ ಆಪ್ತಮಿತ್ರ ದೇಶ ಚೀನಾಕ್ಕೆ ಪಾಕಿಸ್ತಾನ ಮೊರೆ ಹೋಗಿದೆ. ಈ ಸಂಬಂಧ ಖುದ್ದು ಮಾತುಕತೆ ನಡೆಸಲು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಅವರು ಶುಕ್ರವಾರ ಬೀಜಿಂಗ್‌ಗೆ ಆಗಮಿಸಿದ್ದಾರೆ. ಅವರು ಅಧಿಕೃತವಾಗಿ ಮಾತುಕತೆ ಆರಂಭಿಸುವ ಮುನ್ನವೇ ಚೀನಾ ತನ್ನ ಮಿತ್ರ ದೇಶದ ಆಸೆಗೆ ತಣ್ಣೀರೆರಚಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ತಮ್ಮ ನಡುವೆ ಇರುವ ಬಿಕ್ಕಟ್ಟುಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಕಾಶ್ಮೀರಿ ನೀತಿ ಬದಲಿಲ್ಲ- ಅಮೆರಿಕ:  ಈ ನಡುವೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಮೆರಿಕದ ನೀತಿಯಲ್ಲಿ ಬದಲಾವಣೆ ಇಲ್ಲ. ಭಾರತ ಹಾಗೂ ಪಾಕಿಸ್ತಾನಗಳು ಸಹಿಷ್ಣುತೆ ವಹಿಸಿ, ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಆರ್ಟಿಕಲ್ 370 ರದ್ದತಿ: ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಇಮ್ರಾನ್ ಸ್ಥಿತಿ

370ನೇ ರದ್ದು ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕಿಸ್ತಾನ ಕೋರಿಕೆಗೆ ವಿಶ್ವಸಂಸ್ಥೆ ಕೂಡ ಸೊಪ್ಪು ಹಾಕಿಲ್ಲ. 1972ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿಕೊಂಡಿರುವ ಶಿಮ್ಲಾ ಒಪ್ಪಂದ ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವಿಲ್ಲ ಎಂದು ಹೇಳುತ್ತದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರ್ರೆಸ್‌ ತಿಳಿಸುವ ಮೂಲಕ ಈ ವಿಚಾರದಲ್ಲಿ ಮೂಗುತೂರಿಸುವುದಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು