ಗುಜರಾತ್'ನಿಂದ ಒಬ್ಬ ಯೋಧನಾದರೂ ಹುತಾತ್ಮರಾಗಿದ್ದಾರಾ? ಸಾವಿನಲ್ಲೂ ಅಖಿಲೇಶ್ ರಾಜಕೀಯ

Published : May 10, 2017, 01:21 PM ISTUpdated : Apr 11, 2018, 12:43 PM IST
ಗುಜರಾತ್'ನಿಂದ ಒಬ್ಬ ಯೋಧನಾದರೂ ಹುತಾತ್ಮರಾಗಿದ್ದಾರಾ? ಸಾವಿನಲ್ಲೂ ಅಖಿಲೇಶ್ ರಾಜಕೀಯ

ಸಾರಾಂಶ

ಕಾಶ್ಮೀರದಲ್ಲಿ ಯೋಧನೊಬ್ಬನನ್ನು ಕಿಡ್ನಾಪ್ ಮಾಡಿ ಹತ್ಯೆಗೈದಿರುವುದಕ್ಕೆ ಅಖಿಲೇಶ್ ಯಾದವ್  ಸಂತಾಪ ಸೂಚಿಸುತ್ತಾ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಯೋಧರ ಸಾವಿಗೆ ರಾಜಕೀಯದ ಲೇಪ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಲಕ್ನೋ (ಮೇ.10): ಕಾಶ್ಮೀರದಲ್ಲಿ ಯೋಧನೊಬ್ಬನನ್ನು ಕಿಡ್ನಾಪ್ ಮಾಡಿ ಹತ್ಯೆಗೈದಿರುವುದಕ್ಕೆ ಅಖಿಲೇಶ್ ಯಾದವ್  ಸಂತಾಪ ಸೂಚಿಸುತ್ತಾ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಯೋಧರ ಸಾವಿಗೆ ರಾಜಕೀಯದ ಲೇಪ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಈಗ ನಡೆದಿರುವ ಘಟನೆಗೆ ಉತ್ತರವಿಲ್ಲ. ಕೆಲವರ ತಲೆ ಬ್ಲಾಂಕ್ ಆಗಿದೆ. ಯಾಕೆ ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ? ನಮ್ಮ ಯೋಧರ ಶಿರಚ್ಚೇಧನ ನಡೆಯುತ್ತಿದ್ದರೂ ಯಾರೂ ಚಕಾರವೆತ್ತುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಹಾಗೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಗುಜರಾತ್ ನಲ್ಲಿ ಒಬ್ಬ ಯೋಧನಾದರೂ ಹುತಾತ್ಮರಾಗಿದ್ದಾರೆಯೇ? ಎಂದು ಮೋದಿಯವರಿಗೆ ಪರೋಕ್ಷವಾಗಿ ಟಾಂಗ್ ಹೊಡೆದಿದ್ದಾರೆ.

ಯೋಧರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ವಂದೇ ಮಾತರಂ ವಿಚಾರದಲ್ಲಿ ರಾಜಕೀಯ ನಡೆಸುತ್ತಾರೆ. ಇದರ ಬಗ್ಗೆ ಮಾತನಾಡುವುದಿಲ್ಲ. ಮಾತೆತ್ತಿದರೆ ನೀವು ಹಿಂದುಗಳಲ್ಲ ಎಂದು ಅವರು ಹೇಳುತ್ತಾರೆ. ಅವರಿಗೆ ಇವೆಲ್ಲಾ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌