
ಶ್ರೀನಗರ (ಮೇ.10): ಸಂಬಂಧಿಕರ ಮದುವೆಗೆಂದು ಬಂದಿದ್ದ ನಿಶ್ಯಸ್ತ್ರ ಸೇನಾ ಅಧಿಕಾರಿಯೊಬ್ಬರನ್ನು ಮದುವೆ ಮನೆಯಿಂದ ಭಯೋತ್ಪಾದಕರು ನಿನ್ನೆ ರಾತ್ರಿ ಅಪಹರಿಸಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೈದಿದ್ದಾರೆ.
ಮೃತಪಟ್ಟ ಯೋಧ ಉಮರ್ ಫಯಾಜ್ ಎಂದು ತಿಳಿದು ಬಂದಿದೆ. ಇವರ ಮೃತದೇಹ ಅನವರ ಸ್ವಗ್ರಾಮದಿಂದ 30 ಕಿಮೀ ದೂರದಲ್ಲಿರುವ ಶೋಪಿನ್ ನಲ್ಲಿ ಪತ್ತೆಯಾಗಿದೆ.
ಫಯಾಜ್ 5 ತಿಂಗಳ ಹಿಂದೆ ಸೇನೆಗೆ ಸೇರಿದ್ದ. ಸೋದರ ಸಂಬಂಧಿಯ ಮದುವೆಯೆಂದು ರಜೆ ಹಾಕಿ ಸ್ವಗ್ರಾಮ ಕುಲ್ಗಾನ್ ಗೆ ಬಂದಿದ್ದ. ಮೂವರು ಭಯೋತ್ಪಾದಕರು ಮದುವೆ ಮನೆಯ ಮೊದಲ ಮಹಡಿಯಿಂದ ಫಯಾಜ್ ನನ್ನು ಎಳೆದುಕೊಂಡು ಹೋಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಲು ಕುಟುಂಬದವರು ಭಯಭೀತಗೊಂಡಿದ್ದರು. ಜೀವಂತವಾಗಿ ವಾಪಸ್ ಬರುತ್ತಾನೆಂದು ಭರವಸೆಯಿಟ್ಟುಕೊಂಡಿದ್ದರು. ದುರಾದೃಷ್ಟವಶಾತ್ ಮದುವೆಮನೆ ಮಸಣದ ಮನೆಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.