
ಬೀಜಿಂಗ್ (ಅ.10): ಭಾರತ ಮತ್ತು ಪಾಕ್ ನಡುವೆ ಬ್ರಹ್ಮಪುತ್ರ ಉಪನದಿ ತಡೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಜಲ ಸಮರಕ್ಕೆ ಚೀನಾ ಬೆಂಬಲ ನೀಡುತ್ತದೆ ಎನ್ನುವ ಮಾತನ್ನು ಚೀನಾ ತಳ್ಳಿ ಹಾಕಿದೆ.
ನೀರು ಹಂಚಿಕೆ ಸಂಬಂಧಪಟ್ಟಂತೆ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಬಹುಪಕ್ಷೀಯ ಸಹಕಾರ ಒಕ್ಕೂಟಕ್ಕೆ ಸೇರಲು ಚೀನಾ ಸಿದ್ಧವಿದೆ ಎಂದು ಚೀನಾ ಮಾಧ್ಯಮ ಹೇಳಿದೆ.
ಭಾರತ ಮತ್ತು ಚೀನಾದ ಸಂಬಂಧವು ಕಾಲ್ಪನಿಕ ಜಲ ಸಮರದ ಮೇಲೆ ಪ್ರಭಾವ ಬೀರಬಾರದು. ಬ್ರಹ್ಮಪುತ್ರ ನದಿ ನೀರನ್ನು ಚೀನಾ ಅಷ್ಟಾಗಿ ಬಳಸುವುದಿಲ್ಲ. ಹಾಗಾಗಿ ಭಾರತ-ಪಾಕ್ ನಡುವೆ ಮಧ್ಯಪ್ರವೇಶಿಸುವುದಿಲ್ಲವೆಂದು ಚೀನಾ ಸ್ಪಷ್ಟಪಡಿಸಿದೆ.
ಭಾರತದ ಜೊತೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಮಾಡಿಕೊಳ್ಳದ ಚೀನಾಗೆ ಇದು ಮಹತ್ತರವಾದ ಪ್ರಸ್ತಾವನೆಯಾಗಿದೆ ಎಂದು ಚೀನಾ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.