
ನವದೆಹಲಿ: ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಪ್ರಸಿದ್ಧ ಲಡ್ಡುಗೆ ಜಿಎಸ್ಟಿಯಿಂದ ವಿನಾಯ್ತಿ ನೀಡಲಾಗಿದೆ.
ಈ ಕುರಿತು ಟಿಟಿಡಿ ಮಾಡಿದ್ದ ಮನವಿಯನ್ನು ಕೇಂದ್ರ ಜಿಎಸ್ಟಿ ಮಂಡಳಿ ಮಾನ್ಯ ಮಾಡಿದೆ. ಟಿಟಿಡಿ ಮಂಡಳಿ ಲಡ್ಡುಗೆ ಬಳಸುವ ವಸ್ತುಗಳು, ಪೂಜೆಗೆ ಮತ್ತು ಯಾತ್ರಿಕರಿಗೆ ನೀಡುವ ವಸ್ತುಗಳು, ಮುಡಿ ನೀಡಿದ ಕೂದಲಿನ ಹರಾಜು ಮತ್ತು ಇತರೆ ಆದಾಯಗಳಿಗೆ ವಿನಾಯ್ತಿ ನೀಡಬೇಕೆಂದು ಕೋರಿತ್ತು.
ಆದರೆ ಈ ಪೈಕಿ ಲಡ್ಡು, ಮುಡಿ ಕೂದಲು ಮತ್ತು ತಿರುಮಲದಲ್ಲಿನ 1000 ರು.ಗಿಂತ ಕಡಿಮೆ ಬಾಡಿಗೆ ಯಾತ್ರಿಕರ ನಿವಾಸಕ್ಕೆ ವಿನಾಯ್ತಿ ನೀಡಲು ಜಿಎಸ್ಟಿ ಮಂಡಳಿ ಒಪ್ಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.