ರೌಡಿ ನಾಗನಿಗೆ ಜಾಮೀನು ಇಲ್ಲ

Published : May 05, 2017, 01:41 PM ISTUpdated : Apr 11, 2018, 01:08 PM IST
ರೌಡಿ ನಾಗನಿಗೆ ಜಾಮೀನು ಇಲ್ಲ

ಸಾರಾಂಶ

ಉದ್ಯಮಿಗಳನ್ನು ಅಪಹರಿಸಿ ಕೋಟ್ಯಾಂತರ ರೂಪಾಯಿ ಸುಲಿಗೆ ಆರೋಪ ಎದುರಿಸುತ್ತಿರುವ ರೌಡಿ ನಾಗ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಶೆನ್ಸ್ ಕೋರ್ಟ್​ನಲ್ಲಿ ನಾಗ ಆರೋಪಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಮನೆಯಲ್ಲಿ ಸಿಕ್ಕ 15 ಕೋಟಿ ಹಳೆ ನೋಟುಗಳ ಮೂಲ ಮಾತ್ರ ಇನ್ನೂ ನಿಗೂಢವಾಗಿರುವುದರಿಂದ ನಾಗ ವಿಚಾರಣೆ ಅಗತ್ಯವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ಪರ ವಕೀಲರ ವಾದ ಪರಿಗಣಿಸಿದ ಕೋರ್ಟ್​​​ ಅರ್ಜಿ ವಜಾಗೊಳಿಸಿದೆ.

ಬೆಂಗಳೂರು(ಮೇ.05): ಬ್ಲಾಕ್​ ಅಂಡ್​ ವೈಟ್​​ ದಂಧೆಯಲ್ಲಿ ಭಾಗಿಯಾಗಿ ಪೊಲೀಸರಿಂದ ತಲೆತ್ಪಪಿಸಿಕೊಂಡು ತಿರುಗುತ್ತಿರುವ ರೌಡಿಶೀಟರ್ ನಾಗನ ನಿರೀಕ್ಷಣಾ ಜಾಮೀನು ಆರ್ಜಿ ವಜಾಗೊಂಡಿದೆ. ಮತ್ತೊಂದೆಡೆ ಖಾಕಿ ಬಲೆಗೆ ಬಿದ್ದ ನಾಗ ಬಂಟರು ಆತನ ಎಲ್ಲಾ ಕುಕೃತ್ಯಗಳನ್ನು ಎಳೆಎಳೆಯಾಗಿ ಬಿಚ್ಚಿದ್ದಾರೆ. ಇಂದು ನಾಗನ ಪಾಲಿಗೆ ಅಕ್ಷರಶಃ ಅಶುಭ ಶುಕ್ರವಾರ.

ಉದ್ಯಮಿಗಳನ್ನು ಅಪಹರಿಸಿ ಕೋಟ್ಯಾಂತರ ರೂಪಾಯಿ ಸುಲಿಗೆ ಆರೋಪ ಎದುರಿಸುತ್ತಿರುವ ರೌಡಿ ನಾಗ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಶೆನ್ಸ್ ಕೋರ್ಟ್​ನಲ್ಲಿ ನಾಗ ಆರೋಪಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಮನೆಯಲ್ಲಿ ಸಿಕ್ಕ 15 ಕೋಟಿ ಹಳೆ ನೋಟುಗಳ ಮೂಲ ಮಾತ್ರ ಇನ್ನೂ ನಿಗೂಢವಾಗಿರುವುದರಿಂದ ನಾಗ ವಿಚಾರಣೆ ಅಗತ್ಯವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ಪರ ವಕೀಲರ ವಾದ ಪರಿಗಣಿಸಿದ ಕೋರ್ಟ್​​​ ಅರ್ಜಿ ವಜಾಗೊಳಿಸಿದೆ.

ನಾಗನ ಪ್ರಕರಣ ತೀವ್ರಗೊಳಿಸಿರುವ ಎಸಿಪಿ ರವಿಕುಮಾರ್​​, ನಾಗನ ಬಲಗೈ ಬಂಟರಾದ ಸರವಣ, ಶ್ರೀನಿವಾಸ ಹಾಗೂ ಬೌನ್ಸರ್​ ಜೈಕೃಷ್ಣನ್​​​ ರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಾಗ ಮಾಡುತ್ತಿದ್ದ ಬ್ಲಾಕ್​ ಅಂಡ್​ ವೈಟ್​ ದಂದೆಯ ಇಂಚಿಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯಮಿಗಳಿಗೆ ಗನ್​ ತೋರಿಸಿ ಬೆದರಿಸುತ್ತಿದ್ದ ನಾಗ ಮತ್ತವನ ಮಕ್ಕಳು ಸುಲಿಗೆ ಮಾಡುತ್ತಿದ್ದರು. ಅಲ್ಲದೆ, ನಾಗ ಮಾಡಿಸಿದ್ದ ಪ್ರತಿಯೊಂದು ಅಪಹರಣ ಸುಳಿವು ನೀಡಿದ್ದಾರೆ. ಬಂಧಿತರನ್ನು ಕೋರ್ಟ್​​ ಮುಂದೆ ಹಾಜರು ಪಡಿಸಿದ ಪೊಲೀಸರು ಮೇ.12ರವರೆಗೆ ತಮ್ಮ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ನಾಗರಾಜ್​​​ ಮತ್ತವನ ಮಕ್ಕಳಾದ ಗಾಂಧಿ, ಶಾಸ್ತ್ರಿ ಹಾಗೂ ಮೂವರು ಬೌನ್ಸರ್​ಗಳು ಉದ್ಯಮಿಗಳನ್ನು ಕರೆದಂತೆ ಹಲ್ಲೆ ನಡೆಸುತ್ತಿದ್ದರು. ಗನ್​​ ತೋರಿಸಿ ಅವರ ಬಳಿಯಿದ್ದ ಹಣ ಕಿತ್ತುಕೊಂಡು ಪೊಲೀಸರಿಗೆ ದೂರು ನೀಡದಂತೆ ಹೆದರಿಸಿ ಕಳುಹಿಸುತ್ತಿದ್ದರು ಎಂಬ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿದೆ.

ನಾಗನ ಪ್ರಕರಣ ತನಿಖೆಯ ಹೊಣೆಯನ್ನು ಎಸಿಪಿ ರವಿಕುಮಾರ್​ ಹೊಣೆ ನೀಡಿದ ಮೇಲೆ ತನಿಖೆ ವೇಗಗೊಂಡಿದೆ.  ನಾಗ ಬಲಗೈಬಂಟರನ್ನು ಬಂಧಿಸಿರುವ ವಿಶೇಷ ತಂಡ ನಾಗ ಸೆರೆಯಿಡಿಯುವ ವಿಶ್ವಾಸದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!